-->

ಸೋಮವಾರಪೇಟೆ: ಬೇಟೆಗೆಂದು ತೆರಳಿದಾತ ಗುಂಡೇಟಿಗೆ ಬಲಿ!

ಸೋಮವಾರಪೇಟೆ: ಬೇಟೆಗೆಂದು ತೆರಳಿದಾತ ಗುಂಡೇಟಿಗೆ ಬಲಿ!

ಕೊಡಗು: ಬೇಟೆಗೆಂದು ತೆರಳಿರುವ ವ್ಯಕ್ತಿ ಗುಂಡೇಟಿಗೆ ಬಲಿಯಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಯಡವಾರೆ ಗ್ರಾಮದಲ್ಲಿ ನಡೆದಿದೆ. 

ಯಡವಾರೆ ಗ್ರಾಮದ ಶಿವಕುಮಾರ್ (58) ಮೃತ ದುರ್ದೈವಿ.

ಶಿವಕುಮಾರ್ ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ಬೇಟೆಗೆ ತೆರಳಿದ್ದರು‌. ಈ ವೇಳೆ ಈ ದುರ್ಘಟನೆ ನಡೆದಿದೆ. ರಾತ್ರಿ ವೇಳೆ 6 ಮಂದಿಯ ತಂಡ ಕಾಡು ಪ್ರಾಣಿಗಳ ಬೇಟೆಗೆ ತೆರಳಿತ್ತು. ಈ ವೇಳೆ ಪ್ರಾಣಿಗೆಂದು ಬಿಟ್ಟಿರುವ ಗುಂಡು ಶಿವಕುಮಾರ್ ಕುತ್ತಿಗೆ ಭಾಗಕ್ಕೆ ಗುಂಡು ತಗುಲಿದೆ ಎಂದು ಹೇಳಲಾಗುತ್ತಿದೆ.

ಗುಂಡು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೀಗ ಬೇಟೆಗೆ ತೆರಳಿರುವ ಚನ್ನಕೇಶವ , ಚೇತನ್ , ನಂದೀಶ್ , ಮಂಜುನಾಥ್ ರನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು , ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

Ads on article

Advertise in articles 1

advertising articles 2

Advertise under the article