-->

ಬೇರೊಬ್ಬನಿಂದ ಪರೀಕ್ಷೆ ಬರೆದು ಕೆಲಸ ಗಿಟ್ಟಿಸಿಕೊಂಡ ಆರೋಪ: ಪೇದೆ ಮೇಲೆ ಪ್ರಕರಣ ದಾಖಲು

ಬೇರೊಬ್ಬನಿಂದ ಪರೀಕ್ಷೆ ಬರೆದು ಕೆಲಸ ಗಿಟ್ಟಿಸಿಕೊಂಡ ಆರೋಪ: ಪೇದೆ ಮೇಲೆ ಪ್ರಕರಣ ದಾಖಲು

ಬೆಂಗಳೂರು: ಮೀಸಲು ಪಡೆ ಕಾನ್​ಸ್ಟೇಬಲ್​ ನೇಮಕಾತಿ ಪರೀಕ್ಷೆಯನ್ನು ಬೇರೊಬ್ಬ ಅಭ್ಯರ್ಥಿಯಿಂದ ಬರೆಸಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿರುವ ಆರೋಪದಲ್ಲಿ ಪೇದೆಯೊಬ್ಬನ ವಿರುದ್ಧ ಹಲಸೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎಸ್​ಆರ್​ಪಿ ಪಡೆ 1ನೇ ಬೆಟಾಲಿಯನ್​ ಸಹಾಯಕ ಕಮಾಂಡೆಂಟ್​ ಎಂ.ಜಿ.ಸುರೇಶ್​ ಈ ಬಗ್ಗೆ ದೂರು ನೀಡಿದ್ದಾರೆ. 

ಬೆಳಗಾವಿ ಜಿಲ್ಲೆಯ ಗೋಕಾಕ್​ ತಾಲೂಕು ದಡೇರಹಟ್ಟಿ ನಿವಾಸಿ ಸಿದ್ದು ಕುರಿ ಎಂಬಾತನ ವಿರುದ್ಧ ಎಫ್​ಐಆರ್​ ದಾಖಲಾಗಿದೆ. 

2020ರ ಮಾರ್ಚ್​ 28ರಂದು ಪೊಲೀಸ್​ ಇಲಾಖೆಯ ವಿಶೇಷ ಸಶಸ್ತ್ರ ಮೀಸಲು ಪಡೆ ಕಾನ್​ಸ್ಟೇಬಲ್​ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ ವ್ಯಕ್ತಿಯ ಬದಲಿಗೆ ಲಿಖಿತ ಪರೀಕ್ಷೆ, ದೇಹದಾರ್ಡ್ಯ ಮತ್ತು ಸಹಿಷ್ಣುತೆ ಪರೀಕ್ಷೆಗಳಿಗೆ ಅರ್ಜಿದಾರನ ಬದಲಿಗೆ ಬೇರೊಬ್ಬ ಭಾಗವಹಿಸಿದ್ದಾನೆ ಎಂದು ಬೆಳಗಾವಿ ಕೆಎಸ್​ಆರ್​ಪಿ ಐಜಿಪಿ ಶಂಖೆ ವ್ಯಕ್ತಪಡಿಸಿದ್ದಾರೆ. ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಂಡ ಬಳಿಕ ದಾಖಲೆ ಪರಿಶೀಲನೆಗೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಖುದ್ದು ಅಭ್ಯರ್ಥಿಯೇ ಭಾಗವಹಿಸಿದ್ದಾನೆಯೇ? ಅಥವಾ ಬೇರೆ ಅಭ್ಯರ್ಥಿ ಹಾಜರಾಗಿದ್ದಾನೆಯೇ? ಎಂಬುದರ ತನಿಖೆ ನಡೆಸುವಂತೆ ದೂರಿನಲ್ಲಿ ಸುರೇಶ್​ ಮನವಿ ಮಾಡಿದ್ದಾರೆ. ಈ ದೂರಿನ್ವಯ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಹಿಂದೆ ಸಹ ಕೆಎಸ್​ಆರ್​ಪಿ ಕಾನ್​ಸ್ಟೇಬಲ್​ ನೇಮಕಾತಿಯಲ್ಲಿ ಬದಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವುದು ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಪತ್ತೆಯಾಗಿತ್ತು.

Ads on article

Advertise in articles 1

advertising articles 2

Advertise under the article