-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕದ್ದ ಲಾಟರಿಗೆ ಒಲಿಯಿತು ಬಹುಮಾನ: ನಗದು ಪಡೆಯಲೆಂದು ಹೋದ ಖದೀಮನಿಗೆ ಕಾದಿತ್ತು ಶಾಕ್

ಕದ್ದ ಲಾಟರಿಗೆ ಒಲಿಯಿತು ಬಹುಮಾನ: ನಗದು ಪಡೆಯಲೆಂದು ಹೋದ ಖದೀಮನಿಗೆ ಕಾದಿತ್ತು ಶಾಕ್

ಕೊತ್ತಮಂಗಲಂ: ಖದೀಮನೋರ್ವನು ಕದ್ದಿರುವ ಲಾಟರಿ ಟಿಕೆಟ್​ಗೆ ಒಲಿದಿತ್ತು ನಗದು ಬಹುಮಾನ. ಭಾರೀ ಸಂತೋಷದಿಂದ ಬಹುಮಾನದ ನಗದು ಪಡೆಯಲು ಹೋದಾತ ಈಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿರುವ ಘಟನೆ ಕೇರಳದ ಕೊತ್ತಮಂಗಲಂನಲ್ಲಿ ನಡೆದಿದೆ.

ಉರುಂಬಿಲ್​ ಬಾಬು ಬಂಧಿತ ಆರೋಪಿ. ಈತ ಕೊತ್ತಮಂಗಲಂನ ಜೆ.ಜೆ.ಲಾಟರೀಸ್ ಎಂಬ​ ಅಂಗಡಿಯಿಂದ ನವೆಂಬರ್​ 12ರಂದು 80 ಸಾವಿರ ರೂ‌. ಮೌಲ್ಯದ 2,520 ಲಾಟರಿಗಳನ್ನು ಕಳವುಗೈದ್ದಿದ್ದ. ಆ ಬಳಿಕ ಲಾಟರಿ ಏಜೆನ್ಸಿಗಳ ಸಹಾಯದಿಂದ ಕದ್ದಿರುವ ಲಾಟರಿ ಟಿಕೆಟ್‌ಗಳ ಸಂಖ್ಯೆಯನ್ನು ಎಲ್ಲಾ ಕಡೆಗೂ ನೀಡಲಾಗಿತ್ತು.

ಕದ್ದಿರುವ ಲಾಟರಿಗೆ 5 ಸಾವಿರ ರೂ. ನಗದು ಬಹುಮಾನ ಒಲಿದಿತ್ತು. ಅದನ್ನು ತಿಳಿದ ಉರುಂಬಿಲ್​ ಬಾಬು ಹಣ ಪಡೆದುಕೊಳ್ಳಲೆಂದು ಪಲಾ ಎಂಬಲ್ಲಿನ ಲಾಟರಿ ಏಜೆನ್ಸಿ ಅಂಗಡಿಗೆ ಹೋಗಿದ್ದ. ಬಾಬು ಲಾಟರಿಯನ್ನು ನೀಡಿದಾಗ ಅನುಮಾನಗೊಂಡ ಲಾಟರಿ ​ಅಂಗಡಿ ಮಾಲಕ ನಂಬರ್​ ಅನ್ನು ಸರಿಯಾಗಿ ಪರಿಶೀಲನೆ ನಡೆಸಿದ್ದಾನೆ. ಇದರಿಂದ ಬಾಬುವಿಗೆ ಮಾಲಕನಿಗೆ ತನ್ನ ಕೃತ್ಯ ತಿಳಿದಿದೆ ಎಂದು ಅರಿತು ಲಾಟರಿ ಟಿಕೆಟ್​ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಇದಾದ ಬಳಿಕ ಶಾಪ್​ ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹುಡುಕಾಟ ನಡೆಸಿ ಆರೋಪಿ ಬಾಬುವನ್ನು ಸೆರೆ ಹಿಡಿದಿದ್ದಾರೆ. ಆತನ ಮೇಲೆ ಅನೇಕ ಪ್ರಕರಣಗಳು ಕೂಡ ದಾಖಲಾಗಿವೆ. ಸದ್ಯ ಕಂಜಿರಪಲ್ಲಿ ಪೊಲೀಸರು ಬಾಬುನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ

Ads on article

Advertise in articles 1

advertising articles 2

Advertise under the article