-->

ಕದ್ದ ಲಾಟರಿಗೆ ಒಲಿಯಿತು ಬಹುಮಾನ: ನಗದು ಪಡೆಯಲೆಂದು ಹೋದ ಖದೀಮನಿಗೆ ಕಾದಿತ್ತು ಶಾಕ್

ಕದ್ದ ಲಾಟರಿಗೆ ಒಲಿಯಿತು ಬಹುಮಾನ: ನಗದು ಪಡೆಯಲೆಂದು ಹೋದ ಖದೀಮನಿಗೆ ಕಾದಿತ್ತು ಶಾಕ್

ಕೊತ್ತಮಂಗಲಂ: ಖದೀಮನೋರ್ವನು ಕದ್ದಿರುವ ಲಾಟರಿ ಟಿಕೆಟ್​ಗೆ ಒಲಿದಿತ್ತು ನಗದು ಬಹುಮಾನ. ಭಾರೀ ಸಂತೋಷದಿಂದ ಬಹುಮಾನದ ನಗದು ಪಡೆಯಲು ಹೋದಾತ ಈಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿರುವ ಘಟನೆ ಕೇರಳದ ಕೊತ್ತಮಂಗಲಂನಲ್ಲಿ ನಡೆದಿದೆ.

ಉರುಂಬಿಲ್​ ಬಾಬು ಬಂಧಿತ ಆರೋಪಿ. ಈತ ಕೊತ್ತಮಂಗಲಂನ ಜೆ.ಜೆ.ಲಾಟರೀಸ್ ಎಂಬ​ ಅಂಗಡಿಯಿಂದ ನವೆಂಬರ್​ 12ರಂದು 80 ಸಾವಿರ ರೂ‌. ಮೌಲ್ಯದ 2,520 ಲಾಟರಿಗಳನ್ನು ಕಳವುಗೈದ್ದಿದ್ದ. ಆ ಬಳಿಕ ಲಾಟರಿ ಏಜೆನ್ಸಿಗಳ ಸಹಾಯದಿಂದ ಕದ್ದಿರುವ ಲಾಟರಿ ಟಿಕೆಟ್‌ಗಳ ಸಂಖ್ಯೆಯನ್ನು ಎಲ್ಲಾ ಕಡೆಗೂ ನೀಡಲಾಗಿತ್ತು.

ಕದ್ದಿರುವ ಲಾಟರಿಗೆ 5 ಸಾವಿರ ರೂ. ನಗದು ಬಹುಮಾನ ಒಲಿದಿತ್ತು. ಅದನ್ನು ತಿಳಿದ ಉರುಂಬಿಲ್​ ಬಾಬು ಹಣ ಪಡೆದುಕೊಳ್ಳಲೆಂದು ಪಲಾ ಎಂಬಲ್ಲಿನ ಲಾಟರಿ ಏಜೆನ್ಸಿ ಅಂಗಡಿಗೆ ಹೋಗಿದ್ದ. ಬಾಬು ಲಾಟರಿಯನ್ನು ನೀಡಿದಾಗ ಅನುಮಾನಗೊಂಡ ಲಾಟರಿ ​ಅಂಗಡಿ ಮಾಲಕ ನಂಬರ್​ ಅನ್ನು ಸರಿಯಾಗಿ ಪರಿಶೀಲನೆ ನಡೆಸಿದ್ದಾನೆ. ಇದರಿಂದ ಬಾಬುವಿಗೆ ಮಾಲಕನಿಗೆ ತನ್ನ ಕೃತ್ಯ ತಿಳಿದಿದೆ ಎಂದು ಅರಿತು ಲಾಟರಿ ಟಿಕೆಟ್​ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಇದಾದ ಬಳಿಕ ಶಾಪ್​ ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹುಡುಕಾಟ ನಡೆಸಿ ಆರೋಪಿ ಬಾಬುವನ್ನು ಸೆರೆ ಹಿಡಿದಿದ್ದಾರೆ. ಆತನ ಮೇಲೆ ಅನೇಕ ಪ್ರಕರಣಗಳು ಕೂಡ ದಾಖಲಾಗಿವೆ. ಸದ್ಯ ಕಂಜಿರಪಲ್ಲಿ ಪೊಲೀಸರು ಬಾಬುನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article