-->

ಪ್ರೇಯಸಿಯ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿಯೇ ನಡುರಾತ್ರಿ ಹೊತ್ತು ಪ್ರಿಯತಮ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ! : ಡೆತ್ ನೋಟ್ ನಲ್ಲಿತ್ತು ಮನದ ದುಗುಡ

ಪ್ರೇಯಸಿಯ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿಯೇ ನಡುರಾತ್ರಿ ಹೊತ್ತು ಪ್ರಿಯತಮ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ! : ಡೆತ್ ನೋಟ್ ನಲ್ಲಿತ್ತು ಮನದ ದುಗುಡ

ಕೆ.ಆರ್​.ಸಾಗರ: ಪ್ರೇಯಸಿಯ ಅಂತ್ಯಸಂಸ್ಕಾರ ನಡೆದಿರುವ ಸ್ಥಳದಲ್ಲಿಯೇ ಭಗ್ನಪ್ರೇಮಿಯೋರ್ವನು ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮೈಸೂರಿನ ಕೆ.ಆರ್​.ಸಾಗರದಲ್ಲಿ ಸಂಭವಿಸಿದೆ.

ಬೆಳಗೊಳ ಗ್ರಾಮದ ದಿ.ಕುಮಾರ್​ ಎಂಬವರ ಪುತ್ರ ಚಂದನ್​(20) ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ. 

ಮೈಸೂರಿನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಬೆಳಗೊಳ ಗ್ರಾಮದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಅದೇಕೋ ಈತ ಪ್ರಿಯತಮೆ 4 ದಿನಗಳ ಹಿಂದೆ ಮನೆಯಲ್ಲಿಯೇ ನೇಣು ಬಿಗಿದು ಮೃತಪಟ್ಟಿದ್ದಳು. ಆಕೆಯ ಕುಟುಂಬಸ್ಥರು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ತೆರಳಿದ್ದರು.

ಪ್ರೀತಿಸಿದ ಯುವತಿ ಮೃತಪಟ್ಟ ಸುದ್ದಿ ತಿಳಿದು ಚಂದನ್​ ಭಾರೀ ಮನ ನೊಂದಿದ್ದ. ಆಕೆ ಮೃತಪಟ್ಟ ಮೂರನೇ ದಿನದಂದು ರಾತ್ರಿ ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ ಸ್ಥಳದಲ್ಲಿಯೇ ಚಂದನ್ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರುದಿನ  ಬೆಳಗ್ಗೆ ಸುಟ್ಟು ಕರಕಲಾದ ಆತನ ಮೃತದೇಹ ಪತ್ತೆಯಾದ ಬಳಿಕ ವಿಚಾರ ಬಹಿರಂಗಗೊಂಡಿದೆ.

ಆತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪ್ರೇಯಸಿಯ ಅಂತ್ಯಸಂಸ್ಕಾರ ನೆರವೇರಿಸಿದ ಸ್ಥಳದಲ್ಲಿ ಸ್ಕೂಟರ್​ ನಿಲ್ಲಿಸಿ, ಅದರ ಮೇಲೆ ಆಕೆಯ ವೇಲ್​ ಇಟ್ಟಿದ್ದಾನೆ. “ನಿನ್ನನ್ನು ಬಹಳ ಪ್ರೀತಿಸುತ್ತಿದ್ದೆ. ನೀನು ಇರದಿರುವ ಈ ಭೂಮಿಯಲ್ಲಿ ನಾನು ಕೂಡ ಇರಲಾರೆ. ನಿನ್ನ ಬಳಿ ಬರುತ್ತಿರುವೆ. ಜೀವನ ಜಿಗುಪ್ಸೆಯಾಗಿದೆ. ನನ್ನ ಸಾವಿಗೆ ನಾನೇ ಕಾರಣ’ ಎಂದು ಪತ್ರ ಬರೆದಿಟ್ಟು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾನೆ. 

ಬೆಳಗ್ಗೆ ಯುವಕನ ಮೃತದೇಹ ಕಂಡು ಸಾರ್ವಜನಿಕರು ನೀಡಿರುವ ಮಾಹಿತಿಯ ಮೇರೆಗೆ ಸ್ಥಳಕ್ಕೆ ಸರ್ಕಲ್​ ಇನ್​ಸ್ಪೆಕ್ಟರ್​ ಯೋಗೇಶ್​, ಕೆ.ಆರ್​.ಸಾಗರ ಠಾಣೆ ಸಬ್​ ಇನ್​ಸ್ಪೆಕ್ಟರ್​ ಲಿಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಮೊಬೈಲ್​, ಬೈಕ್​ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 

ರಾತ್ರಿ ಬಹಳಹೊತ್ತು ನಮ್ಮೊಂದಿಗೆ ಮಾತನಾಡಿದ್ದ. ಆ ಬಳಿಕ ಆತ ಪ್ರೇಯಸಿಯ ಅಂತ್ಯಸಂಸ್ಕಾರ ನಡೆದಿರುವಲ್ಲಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ. ಈ ಬಗ್ಗೆ ಕೆ.ಆರ್​.ಸಾಗರ ಠಾಣೆಯಲ್ಲಿ  ದೂರು ದಾಖಲಾಗಿದೆ. 

Ads on article

Advertise in articles 1

advertising articles 2

Advertise under the article