-->

ಮಂಗಳೂರಿನಲ್ಲಿ ಒಂಟಿಯಾಗಿ ಹೋಗುವ  ಬೈಕ್ ನಲ್ಲಿ ಸವಾರರ ಸುಲಿಗೆ- ಮಂಗಳಮುಖಿ ಅರೆಸ್ಟ್

ಮಂಗಳೂರಿನಲ್ಲಿ ಒಂಟಿಯಾಗಿ ಹೋಗುವ ಬೈಕ್ ನಲ್ಲಿ ಸವಾರರ ಸುಲಿಗೆ- ಮಂಗಳಮುಖಿ ಅರೆಸ್ಟ್


ಮಂಗಳೂರು; ಒಂಟಿಯಾಗಿ ಹೋಗುವ ಬೈಕ್ ಸವಾರರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು ನಗರದ ಇಜಿಪುರದ  ಅಭಿಷೇಕ್ @ ಗೊಂಬೆ @ ಅನಾಮಿಕ ( 27) ಬಂಧಿತ ಮಂಗಳಮುಖಿ.


ಮಂಗಳೂರು ನಗರದ ನಂತೂರು ಪದವು ಬಳಿಯಿರುವ ಬಿ ಎಸ್ ಎನ್ ಎಲ್ ಎಕ್ಸ್‌ಚೇಂಜ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ  ಗಣೇಶ್ ಶೆಟ್ಟಿ ರವರು ಬೈಕ್ ನಲ್ಲಿ ಬರುವಾಗ ಈ  ಮಂಗಳ ಮುಖಿ ರಸ್ತೆಗೆ ಅಡ್ಡ ಬಂದು ಗಣೇಶ್ ಶೆಟ್ಟಿರವರನ್ನು ತಡೆದು ನಿಲ್ಲಿಸಿ , ಅವರ ಮುಖಕ್ಕೆ ಪೆಪ್ಪರ್ ಸ್ಪೇ ಮಾಡಿ ಅವರ ಕುತ್ತಿಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದನು. ಈ ಪ್ರಕರಣದಲ್ಲಿ ಆರೋಪಿಯನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದಾಗ ಈತ ಮೂರು‌ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ.

 ಆರೋಪಿ ಯಿಂದ ಒಟ್ಟು 71 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. 

Ads on article

Advertise in articles 1

advertising articles 2

Advertise under the article