-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪತ್ನಿ ಆತ್ಮಹತ್ಯೆ ‌ಮಾಡಿರುವ ವಿಚಾರ ತಿಳಿದು ಪತಿ ವಿಷ ಸೇವಿಸಿ ಮೃತ್ಯು: ನವ ದಂಪತಿಗಳ ದುರಂತ ಅಂತ್ಯ

ಪತ್ನಿ ಆತ್ಮಹತ್ಯೆ ‌ಮಾಡಿರುವ ವಿಚಾರ ತಿಳಿದು ಪತಿ ವಿಷ ಸೇವಿಸಿ ಮೃತ್ಯು: ನವ ದಂಪತಿಗಳ ದುರಂತ ಅಂತ್ಯ

ತುಮಕೂರು: ಪತ್ನಿ ನೇಣಿಗೆ ಶರಣಾದ ವಿಚಾರ ತಿಳಿದು ಪತಿಯೂ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ದುರಂತ ಘಟನೆಯೊಂದು ತುಮಕೂರಿನ ಕುಣಿಗಲ್‌ ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ. 

ನಾಲ್ಕು ತಿಂಗಳ ಹಿಂದೆಯಷ್ಟೇ ಇಬ್ಬರಿಗೂ ವಿವಾಹವಾಗಿತ್ತು. ಸುಖ ದಾಂಪತ್ಯದ ಕನಸು ಕಾಣುತ್ತಾ ಸಂಸಾರ ನಡೆಸ ಬೇಕಿದ್ದ ನವಜೋಡಿಯೊಂದು ದುರಂತವಾಗಿ ಅಂತ್ಯವಾಗಿದ್ದಾರೆ. ಇದೀಗ ಮದುವೆಯಾಗಿ ಸಂತೋಷದಲ್ಲಿದ್ದ ಮನೆಯು ಶೋಕ ಸಾಗರದಲ್ಲಿ ಮುಳುಗಿದೆ.

ಕೆಂಪಸಾಗರದ ಮುನಿರಾಜು (26), ವರಲಕ್ಷ್ಮಿ(22) ದುರಂತ ಅಂತ್ಯ ಕಂಡಿರುವ ನವ ದಂಪತಿ.

ವರಲಕ್ಷ್ಮಿ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದಂಪತಿಯ ಮಧ್ಯೆ ಜಗಳ ನಡೆದಿರುವುದರಿಂದ ವರಲಕ್ಷ್ಮಿ ತವರಿಗೆ ಹೋಗಿದ್ದರು. ಆದರೆ ಮುನಿರಾಜು ಅತ್ತೆ ಮನೆಗೆ ಹೋಗಿ ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ. ಪತಿಯ ಮನೆಗೆ ವಾಪಸಾದ ವರಲಕ್ಷ್ಮಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಈ ಸಂದರ್ಭ ಮುನಿರಾಜು ಕುಣಿಗಲ್‍ನಲ್ಲಿರುವ ತಮ್ಮ ಚಿಲ್ಲರೆ ಅಂಗಡಿಗೆ ಹೋಗಿದ್ದರು. ಅತ್ತೆ-ಮಾವ ಜಮೀನು ಕೆಲಸಕ್ಕಾಗಿ ಹೋಗಿದ್ದರು. ಈ ಸಮಯದಲ್ಲಿ ವರಲಕ್ಷ್ಮಿ ಆತ್ಮಯ ಮಾಡಿಕೊಂಡಿದ್ದಾರೆ. ಮಧ್ಯಾಹ್ನ ಮುನಿರಾಜು ಹೆತ್ತವರು ಮನೆಗೆ ವಾಪಸ್ ಆದ ಸಂದರ್ಭ ವರಲಕ್ಷ್ಮಿ ಮೃತದೇಹ ನೇತಾಡುತ್ತಿರುವುದನ್ನು ಕ‌ಂಡಿದ್ದಾರೆ. ತಕ್ಷಣ ಅವರು ಮಗನಿಗೆ ವಿಚಾರ ತಿಳಿಸಿದ್ದಾರೆ.

ಪತ್ನಿ ನೇಣಿಗೆ ಶರಣಾಗಿರುವ ವಿಚಾರ ತಿಳಿಯುತ್ತಿದ್ದಂತೆ ಗಾಬರಿಯಾಗಿರುವ ಮುನಿರಾಜು ಕೂಡಾ ಅಲ್ಲಿಯೇ ವಿಷ ಸೇವನೆ ಮಾಡಿ ತೋಟಕ್ಕೆ ಹೋಗಿ  ಮರಕ್ಕೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article

ಸುರ