-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ನೀರು ಕೇಳುವ ನೆಪದಿಂದ ಮನೆಯೊಡತಿಯ ಕತ್ತಿಗೆ ಕೈಹಾಕಿ ಸರ ಕದಿಯಲು ಯತ್ನಿಸಿದಾತ ಪೊಲೀಸ್ ಅತಿಥಿಯಾದ!

ನೀರು ಕೇಳುವ ನೆಪದಿಂದ ಮನೆಯೊಡತಿಯ ಕತ್ತಿಗೆ ಕೈಹಾಕಿ ಸರ ಕದಿಯಲು ಯತ್ನಿಸಿದಾತ ಪೊಲೀಸ್ ಅತಿಥಿಯಾದ!

ಬೆಂಗಳೂರು: ಬಾಯಾರಿಕೆಯಾಗುತ್ತದೆ ಎಂದು ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿದಾತ ಮನೆಯೊಡತಿಯ ಸರ ಕದಿಯಲು ಯತ್ನಿಸಿ ಪೊಲೀಸ್ ಅತಿಥಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಟಿ.ಬೇಗೂರಿನಲ್ಲಿ ನಡೆದಿದೆ‌.

ಕಲಬುರಗಿ ಜಿಲ್ಲೆಯ ಸಿದ್ಧಾಪುರ ಮೂಲದ ಮಾರುತಿ ಎಂಬಾತನೇ ಕೃತ್ಯ ಎಸಗಿದಾತ. ಸ್ಥಳೀಯರೇ ಈತನಿಗೆ ಸರಿಯಾಗಿ ಒದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮದ್ಯಪಾನ ಮಾಡಿದ್ದ ಮಾರುತಿ ಹನುಮಕ್ಕ ಎಂಬವರು ವಾಸಿಸುತ್ತಿದ್ದ ಬಾಡಿಗೆಯತ್ತ ಬಂದು ನೀರು ಕೇಳಿದ್ದಾನೆ. ಆಕೆ ನೀರು ತರಲೆಂದು ಒಳ ಹೋದ ತಕ್ಷಣ ಮಾರುತಿ ಮನೆಯೊಳಗೆ ನುಗ್ಗಿ ಆಕೆಯ ಸರ ಕದಿಯಲು ಯತ್ನಿಸಿದ್ದಾನೆ. ಏಕಾಏಕಿ ಮಾರುತಿ ಒಳ ಬಂದು ಸರ ಕದಿಯಲು ಯತ್ನಿಸುತ್ತಿರುವುದನ್ನು ಕಂಡು ಗಾಬರಿಯಾದ ಹನುಮಕ್ಕ ಬೊಬ್ಬೆ ಹಾಕಿದ್ದಾರೆ. 

ತಕ್ಷಣ ಅಲ್ಲಿ ಜನ ಜಮಾಯಿಸಿದ್ದು ಸ್ಥಳೀಯರೇ ಆರೋಪಿ ಮಾರುತಿಯನ್ನು ಹಿಡಿದು ಸರಿಯಾಗಿ ಹೊಡೆದು ಮರಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ