-->

preservation of cattle bill 2020 | ಪ್ರತಿಪಕ್ಷಗಳ ವಿರೋಧದ ಮಧ್ಯೆ ಗೋಹತ್ಯೆ ನಿಷೇಧ ಕಾಯ್ದೆಗೆ ಸದನ ಅಸ್ತು

preservation of cattle bill 2020 | ಪ್ರತಿಪಕ್ಷಗಳ ವಿರೋಧದ ಮಧ್ಯೆ ಗೋಹತ್ಯೆ ನಿಷೇಧ ಕಾಯ್ದೆಗೆ ಸದನ ಅಸ್ತು




Karnataka prevention of slaughter and preservation of cattle bill 2020




ಬೆಂಗಳೂರು: ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ವಿರೋಧದ ನಡುವೆ ಕರ್ನಾಟಕದ ವಿಧಾನಸಭೆ ಗೋಹತ್ಯೆ ನಿಷೇಧ ಕರಡು ವಿಧೇಯಕಕ್ಕೆ ಅಂಗೀಕಾರ ನೀಡಿದೆ.



ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರು ವಿಧೇಯಕ ಮಂಡಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಗದ್ದಲ ಆರಂಭಿಸಿದರು. 


ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧೇಯಕವನ್ನು ವಿರೋಧಿಸಿ, ಇದರಿಂದ ಹಲವಾರು ರೈತ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಎಚ್ಚರಿಸಿದರು. ಕಲಾಪವನ್ನು ಬಹಿಷ್ಕರಿಸಿ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರನಡೆದರು.



ಆದರೂ ಪಟ್ಟು ಬಿಡದ ಬಿಜೆಪಿ ಸರ್ಕಾರ ಕಾಯ್ದೆ ಅಂಗೀಕಾರವಾಗುವಂತೆ ನೋಡಿಕೊಂಡಿದೆ. 


ಸಚಿವರು ಮಂಡಿಸಿದ ವಿಧೇಯಕಕ್ಕೆ ಸ್ಪೀಕರ್ ಅಂಗೀಕಾರದ ಮುದ್ರೆ ಒತ್ತಿದರು.

Ads on article

Advertise in articles 1

advertising articles 2

Advertise under the article