-->
ಸ್ವಸ್ತಿಕ್ ಯುವ ಕೇಂದ್ರ (ರಿ), ಜಲ್ಲಿಗುಡ್ಡೆ , ಬಜಾಲ್ ನ ನೂತನ  ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಜಯ ಕೋಟ್ಯಾನ್ ಆಯ್ಕೆ

ಸ್ವಸ್ತಿಕ್ ಯುವ ಕೇಂದ್ರ (ರಿ), ಜಲ್ಲಿಗುಡ್ಡೆ , ಬಜಾಲ್ ನ ನೂತನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ಜಯ ಕೋಟ್ಯಾನ್ ಆಯ್ಕೆ

 



ಮಂಗಳೂರು: ಸ್ವಸ್ತಿಕ್ ಯುವ ಕೇಂದ್ರ (ರಿ), ಜಲ್ಲಿಗುಡ್ಡೆ ಬಜಾಲ್ ನ  ಮಹಾಸಭೆಯು ಜೂನ್ 15 ರಂದು  ಬಜಾಲ್ ನ ನಂದನ ಭವನದಲ್ಲಿ ಗೌರವಾಧ್ಯಕ್ಷ ಮೋಹನ್ ಕೆ ಇವರ ನೇತೃತ್ವದಲ್ಲಿ  ನಡೆದಿದ್ದು, ಈ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು 2025-26-27 ಎರಡು ವರ್ಷದ ಅವಧಿಗೆ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ  ಮೋಹನ್ ಕೆ, ಅಧ್ಯಕ್ಷರಾಗಿ ಜಯ ಕೋಟ್ಯಾನ್, ಸಂಚಾಲಕರಾಗಿ ಶಿವಪ್ರಸಾದ್ ರಾವ್, ಉಪಾಧ್ಯಕ್ಷರಾಗಿ ಶ್ರೀಮತಿ ಸುಚಿತ್ರ ಕೆ, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ರಾಂತ್ ರಾವ್, ಜೊತೆ ಕಾರ್ಯದರ್ಶಿಯಾಗಿ ರಶ್ಮಿ ಡಿ ಸೋಜ, ಕೋಶಾಧಿಕಾರಿ ಶ್ರೀಮತಿ ಸುಪ್ರಿಯ, ಉಪಕೋಶಾಧಿಕಾರಿಯಾಗಿ ಶ್ರೀಮತಿ ಪ್ರಮೀಳಾ, ಲೆಕ್ಕ ಪರಿಶೋಧಕಿಯಾಗಿ ಶ್ರೀಮತಿ ಶಿಲ್ಪ,  ಸಮಾಜ ಸೇವಾ ಕಾರ್ಯದರ್ಶಿಯಾಗಿ ಯತೀಶ್ ಸಾಲಿಯಾನ್, ಸಂಘಟನಾ ಕಾರ್ಯದರ್ಶಿಯಾಗಿ ನಿತೇಶ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅನುಷಾ ಭಟ್, ಕ್ರೀಡಾ ಕಾರ್ಯದರ್ಶಿಯಾಗಿ  ಸಂದೀಪ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಸೀತಾರಾಮ ಪೂಜಾರಿ, ಗೌರವ ಸಲಹೆಗಾರರಾಗಿ ಶ್ರೀಮತಿ ಮೇಝಿ ಡಿಸೋಜ, ಶ್ರೀಮತಿ ಜ್ಯೋತಿ ಅಶೋಕ್, ಶ್ರೀಮತಿ ತೀರ್ಥಕಲಾ ರಾವ್,  ಎಸ್. ರಾಜ್, ಸುದೇಶ್ ಅಮೀನ್ ಮತ್ತು ಸಮಿತಿ ಸದಸ್ಯರಾಗಿ ನಾಗರಾಜ್, ಚರಣ್ ರಾಜ್, ಪದ್ಮನಾಭ ರಾವ್. ಮನೋಜ್, ಮೋನಿಷಾ, ಮಹೇಶ್ ಗಾಣಿಗ, ಜಯಲತಾ, ದಿನೇಶ್, ಬ್ರಿಜೇಶ್ , ಪೂರ್ವಿ, ಅದ್ವಿತಿ, ಮಾಗ್ಯಾನ್ ಸಾಲಿಯಾನ್ ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.

ಮಹಾಸಭೆಯ ಕಾರ್ಯಕ್ರಮವನ್ನು ಶ್ರೀಮತಿ ಜ್ಯೋತಿ ಅಶೋಕ್ ನಿರೂಪಿಸಿದರು.

 

 

 

Ads on article

Advertise in articles 1

advertising articles 2

Advertise under the article