-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಅತ್ತೂರು ಕೈಲಾಜೆ ಉಮಾಮಹೇಶ್ವರ ದೇವಸ್ಥಾನ ದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮಹೋತ್ಸವ -ನಂದಿಗೋಣ,ರಕ್ತೇಶ್ವರಿ ಕುಕ್ಕಿ ನಂತಾಯಿ, ದೈವಗಳ ನೇಮೋತ್ಸವ ( VIDEO)

ಅತ್ತೂರು ಕೈಲಾಜೆ ಉಮಾಮಹೇಶ್ವರ ದೇವಸ್ಥಾನ ದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮಹೋತ್ಸವ -ನಂದಿಗೋಣ,ರಕ್ತೇಶ್ವರಿ ಕುಕ್ಕಿ ನಂತಾಯಿ, ದೈವಗಳ ನೇಮೋತ್ಸವ ( VIDEO)





ವರದಿ ಅರುಣ್ ಭಟ್ ಕೈಲಾಜೆ ಕಾರ್ಕಳ 

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಅತ್ತೂರು ಕೈಲಾಜೆ ಉಮಾಮಹೇಶ್ವರ ದೇವಸ್ಥಾನ ದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಹಾಗೂ ದೈವಗಳ ಬಲಿ ನೇಮೋತ್ಸವ  ಆದಿತ್ಯವಾರ ನಡೆಯಿತು.

 ಬೆಳಿಗ್ಗೆ ಕಲಶಾಭಿಷೇಕ,ಹೋಮ ಹವನ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳು ಮದ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ರಾತ್ರಿ ನಂದಿಗೋಣ,ರಕ್ತೇಶ್ವರಿ ಕಾಳರಾತ್ರಿ ಕುಕ್ಕಿ ನಂತಾಯಿ, ದೈವಗಳ ನೇಮೋತ್ಸವ ಹಾಗೂ ಶ್ರೀ ಉಮಾಮಹೇಶ್ವರ ದೇವರಿಗೆ ರಂಗ ಪೂಜೆ ಉತ್ಸವ ಇತ್ಯಾದಿ ವಿಜೃಂಭಣೆಯಿಂದ ನಡೆಯಿತು. 

ವೇದಮೂರ್ತಿ ಗುರುರಾಜ್ ಭಟ್ ,ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಅರ್ಚಕರು ಶಿವಶಂಕರ್ ಭಟ್, ಆಡಳಿತ ಮಂಡಳಿ ಯ ಮೊಕ್ತೇಸರ ಅರವಿಂದ ಕಾರ್ನಾಡ್, ಆನಂದ್ ಕಾರ್ನಾಡ್, ಹಾಗೂ ವಿಜಯ್ ಆರೂರ್ ,ಪ್ರಸನ್ನ ಆರ್, ಕೈಲಾಜೆ,   ಉದಯ್  ಭಜಕಲ್ ಮತ್ತು ಗಣ್ಯ ವ್ಯಕ್ತಿಗಳಾದ ರವೀಂದ್ರ ಶೆಟ್ಟಿ ಬಜಗೋಳಿ   ಹಾಗೂ ಭಕ್ತಾದಿಗಳು ಶ್ರೀ ಉಮಾಮಹೇಶ್ವರ ದೇವರ ಪ್ರಸಾದ ಹಾಗೂ ದೈವಗಳ ಸಿರಿಮುಡಿ ಗಂದ ಪ್ರಸಾದ ಸ್ವೀಕರಿಸಿದರು.




Ads on article

Advertise in articles 1

advertising articles 2

Advertise under the article

ಸುರ