-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಯುವ ಮೋರ್ಚಾ - BJP ವಿವಿಧ ಮೋರ್ಚಾಗಳಿಗೆ ಪ್ರ.ಕಾರ್ಯದರ್ಶಿಗಳ ನೇಮಕ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಯುವ ಮೋರ್ಚಾ - BJP ವಿವಿಧ ಮೋರ್ಚಾಗಳಿಗೆ ಪ್ರ.ಕಾರ್ಯದರ್ಶಿಗಳ ನೇಮಕ



 ಬೆಂಗಳೂರು : ಬಿಜೆಪಿಯ ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳನ್ನು ನೇಮಕ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಣೆ ನೀಡಿದ್ದಾರೆ. 


ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಹರೀಶ್ ಪೂಂಜಾ ಎರಡನೇ ಬಾರಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿದ್ದಾರೆ.


 ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪುತ್ರ ಉಮೇಶ್ ಕಾರಜೋಳರನ್ನು ಎಸ್‌ಸಿ ಮೋರ್ಚಾ ಪ್ರಧಾನ ಕಾವ್ಯದರ್ಶಿಯನ್ನಾಗಿ ನೇಮಿಸಲಾಗಿದೆ. 

ಮಹಿಳಾ ಮೋರ್ಚಾ- ಶಿಲ್ಪಾಜಿ ಸುವರ್ಣ (ಉಡುಪಿ) ಮತ್ತು ಡಾ.ಶೋಭಾ ಸಂಗನಗೌಡ (ಹಾವೇರಿ), ಯುವ ಮೋರ್ಚಾ- ಹರೀಶ್ ಪೂಂಜಾ (ದಕ್ಷಿಣ ಕನ್ನಡ) ಹಾಗೂ ಸಂದೀಪ್ ರವಿ (ಬೆಂಗಳೂರು), ಎಸ್‌ಟಿ ಮೋರ್ಚಾ- ಕೃಷ್ಣಾ ನಾಯಕ್ (ಮೈಸೂರು) ಮತ್ತು ಬಸವರಾಜ ಹುಂದ್ರಿ (ಚಿಕ್ಕೋಡಿ), ಎಸ್‌ಸಿ ಮೋರ್ಚಾ- ಉಮೇಶ್ ಕಾರಜೋಳ (ಬಾಗಲಕೋಟೆ) ಹಾಗೂ ಮಹೇಂದ್ರ ಕೌತಾಳ (ಧಾರವಾಡ), ಹಿಂದುಳಿದ ವರ್ಗಗಳ ಮೋರ್ಚಾ- ಅವ್ವಣ್ಣ ಮ್ಯಾಕೇರಿ (ಕಲಬುರಗಿ ಗ್ರಾಮಾಂತರ) ಮತ್ತು ಸೋಮಶೇಖರ್ (ಬೆಂಗಳೂರು), ರೈತ ಮೋರ್ಚಾ- ಡಾ.ಬಿ.ಸಿ.ನವೀನ್‌ಕುಮಾರ್ (ಕೊಡಗು) ಹಾಗೂ ಕಲ್ಮರುಡಪ್ಪ (ಚಿಕ್ಕಮಗಳೂರು), ಅಲ್ಪಸಂಖ್ಯಾತ ಮೋರ್ಚಾ- ಇಂದ್ರಕುಮಾರ್ (ಬೆಂಗಳೂರು) ಮತ್ತು ರೌಫುದ್ದೀನ್ ಕಛೇರಿವಾಲೆ (ಬೀದರ್).


Ads on article

Advertise in articles 1

advertising articles 2

Advertise under the article

ಸುರ