-->
1000938341
Sulya:- ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ. ದೇವಿ ಪ್ರಸಾದ್ ಕಾನತ್ತೂರ್ ಆಯ್ಕೆ.

Sulya:- ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ. ದೇವಿ ಪ್ರಸಾದ್ ಕಾನತ್ತೂರ್ ಆಯ್ಕೆ.

ಪಂಜ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಡಾ ದೇವಿ ಪ್ರಸಾದ್ ಕಾನತ್ತೂರ್ ಆಯ್ಕೆಯಾದರು.

ಸಭೆಯ ಅಧ್ಯಕ್ಷತೆಯನ್ನು ಪಂಜ ನಾಡಕಚೇರಿಯ ಉಪತಹಸಿಲ್ದಾರ ಚಂದ್ರಕಾಂತರು ಹಾಗೂ ವೇದಿಕೆಯಲ್ಲಿ ನಡೆಸಲಾಯಿತು. ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಳ, ಉತ್ಸವ ಸಮಿತಿ ಸದಸ್ಯರಾದ ಬಾಲಕೃಷ್ಣ ಕುದ್ವ, ಕುಶಾಲಪ್ಪ ದೊಡ್ಡಮನೆ, ಮಾಯಲಪ್ಪ ಗೌಡ ಏನ್ ಊರು, ಧರ್ಮಣ್ಣ ನಾಯಕ್ ಗರಡಿ, ಧರ್ಮಪಾಲ ಕಾಚಿಲ, ಕೇಶವ ಕುದ್ವ, ಸಂತೋಷ್ ಕುಮಾರ್ ರೈ ಬಳ್ಪ, ಪವಿತ್ರ ಮಲ್ಲೆಟ್ಟಿ, ತಿಮ್ಮಪ್ಪ ಗೌಡ ಪುತ್ಯ, ಅಶ್ವಿನ್ ಬಾಬುಲ್ ಬೆಟ್ಟು, ಶರತ್ ಕುದ್ವ, ಉಪಸ್ಥಿತರಿದ್ದರು. ಸಭೆಯಲ್ಲಿ ಕಂಬಳ ಆನಂದ ಗೌಡ,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ರೈ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಂಕರ ಭಟ್, ರಂಜಿತ್ ಬಟ್, ಗಂಗಾಧರ ಗುಂಡಡ್ಕ, ಲೋಕೇಶ್ ಅಕ್ರಿಕಟ್ಟೆ, ಅರ್ಚಕರಾದ ರಾಮಚಂದ್ರ ಭಟ್ ಹಾಗೂ ಊರ ಭಕ್ತಾಭಿಮಾನಿಗಳು ಜಾತ್ರೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. 

ಬಾಲಕೃಷ್ಣ ಗೌಡ ಕುದ್ವ  ಸ್ವಾಗತಿಸಿ ವಂದಿಸಿದರು. ಕಲ್ಮಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಳ ಪ್ರಸ್ತಾವಿಕ ಮಾತುಗಳನ್ನಾಡಿದರು.

Ads on article

Advertise in articles 1

advertising articles 2

Advertise under the article