ಬಸ್ ನಲ್ಲಿ‌ ಅಜ್ಜನಿಗೆ ನಿದ್ದೆ- ತಪ್ಪಿಸಿಕೊಂಡ 3 ವರ್ಷದ ಮಗು



ಚಿಕ್ಕಮಗಳೂರು: ಅಜ್ಜನ ನಿರ್ಲಕ್ಷ್ಯದಿಂದಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂರು ವರ್ಷದ ಮಗು ತಪ್ಪಿಸಿಕೊಂಡು ಹೋದ ಘಟನೆ ಬುಧವಾರ ತರೀಕೆರೆ ತಾಲೂಕಿನಲ್ಲಿ ನಡೆದಿದೆ. 


 ಪೊಲೀಸರು ಹಾಗೂ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಹೆತ್ತವರು ಮಡಿಲು ಮಗು ಸೇರಿದೆ. ಬುಧವಾರ ಬೆಳಗ್ಗೆ 3 ವರ್ಷದ ಶ್ರೇಯಸ್ ತನ್ನ ಅಜ್ಜನೊಂದಿಗೆ ತರೀಕೆರೆ ಬಸ್ ನಿಲ್ದಾಣದಲ್ಲಿ ತಾಲೂಕಿನ ತಣಿಗೆಬೈಲು ಗ್ರಾಮಕ್ಕೆ ವೇಳೆ  ತೆರಳಲು ಬಸ್ ಹತ್ತಿದೆ. 


ಈ ವೇಳೆ ಅಜ್ಜ ನಿದ್ರೆಗೆ ಜಾರಿದ್ದು, ಬಸ್‌ನಿಂದ ಇಳಿದ ಮಗು ಬೇರೊಂದು ಬಸ್ಸನ್ನು ಹತ್ತಿದೆ. ಬಸ್‌ನಲ್ಲಿ ಅಜ್ಜನನ್ನು ಕಾಣದೇ

ಮಗು ಅಳಲಾರಂಭಿಸಿದ್ದು, ಈ ವೇಳೆ ಅದೇ ಬಸ್‌ನಲ್ಲಿದ್ದ ಇಮ್ರಾನ್ ಮತ್ತಿತರರು ಮಗುವನ್ನು ನಗರದ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ.


ಪೊಲೀಸರು ಹಾಗೂ ಸಾರ್ವಜನಿಕರು ಮಗುವಿನ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಪೋಷಕರ ಪತ್ತೆಗೆ ಮನವಿ ಮಾಡಿದ್ದಾರೆ. ವಿಷಯ

ತಿಳಿದು ಹೆತ್ತವರು ಠಾಣೆಗೆ ಆಗಮಿಸಿ ಮಗುವನ್ನು ಕರೆದೊಯ್ದಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu