-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ವಿದೇಶಿ ಯುವತಿಗಾಗಿ ಪ್ರಾಣತ್ಯಾಗ ಮಾಡಿದ ಕರ್ನಾಟಕದ ಯುವಕ

ವಿದೇಶಿ ಯುವತಿಗಾಗಿ ಪ್ರಾಣತ್ಯಾಗ ಮಾಡಿದ ಕರ್ನಾಟಕದ ಯುವಕ

ಕಲಬುರಗಿ: ತಾನು ಪ್ರೀತಿ ಮಾಡಿದ್ದ ವಿದೇಶಿ ಹುಡುಗಿಯೊಂದಿಗೆ ಸಣ್ಣದಾಗಿ ಮನಸ್ತಾಪ ಮಾಡಿಕೊಂಡು ಜಗಳ ಮಾಡಿದ್ದ‌ ಕರ್ನಾಟಕದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.


ನಗರದ ಕುಸನೂರು ರಸ್ತೆಯ ಜ್ಯೋತಿ ಬಾಪುಲೆ ನಗರ, ಬಾಪುರೇ ಲೇಔಟ್ ನಿವಾಸಿ ಶಶಾಂಕ ಕಟ್ಟಿಮನಿ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಗುಲ್ಬರ್ಗ ವಿವಿಯ ಆವರಣದ ಕುಲಪತಿಗಳ ಮನೆ ಹಿಂದುಗಡೆಯ ಹಾಳು ಬಿದ್ದ ಕೋಣೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದೆ.


ಬೆಳಗ್ಗೆ ಕುರಿಗಾಯಿ ಬಾಲಕ ಶವವನ್ನು ನೋಡಿ ವಿವಿ ಸಿಬ್ಬಂದಿಗೆ ತಿಳಿಸಿದ್ದ ಅವರು, ಕೂಡಲೇ ವಿವಿ ಆವರಣದಲ್ಲಿ ಇರುವ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದರು. ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದಾಗ ವಿಷಯ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದೇಶಿ ಹುಡುಗಿಯ ಪ್ರೇಮ
ಆತ್ಮಹತ್ಯೆಗೆ ಶರಣಾದ ಶಶಾಂಕ ಕಟ್ಟಿಮನಿ ಫಿಲಿಫೈನ್ಸ್ ದೇಶದ ಯುವತಿಯೊಂದಿಗೆ ಸಲುಗೆಯಿಂದ ಇದ್ದ. ಅದನ್ನು ಪ್ರೇಮವೆಂದೂ ತಿಳಿದಿದ್ದ. ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬರಲು ಯುವತಿ ಮನೆಯವರಿಗೆ ನೀಡಿದ ಮಾಹಿತಿಯೇ ಕಾರಣ ಎನ್ನಲಾಗುತ್ತಿದೆ. ಈ ಅಂಶವನ್ನು ಪೊಲೀಸರು ದೂರಿನಲ್ಲೂ ದಾಖಲು ಮಾಡಿದ್ದಾರೆ





ಬೆಳಗ್ಗೆಯಿಂದ ಮಗ ಕಾಣುತ್ತಿರಲಿಲ್ಲ, ಯುವತಿಯೂ ಶಶಾಂಕ ಅವರ ಸಹೋದರಿಗೆ ಕರೆ ಮಾಡಿ ನಿಮ್ಮ ತಮ್ಮ ಎಲ್ಲಿದ್ದಾನೆ ಎಂದು ಕೇಳಿದ್ದಾಳೆ. ನಂತರ ಪಾಲಕರು ಆತನ ಹುಡುಕಾಟದಲ್ಲಿ ತೊಡಗಿದ್ದಾಗ ವಿವಿ ಆವರಣದಲ್ಲಿ ಶವ ಪತ್ತೆಯಾಗಿದೆ.ಈ ಎಲ್ಲ ಬೆಳವಣಿಗೆಯಿಂದ ಇದೊಂದು ಪ್ರೇಮ ಪ್ರಕರಣ ಎಂದು ಪೊಲೀಸರು ಅಂದಾಜು ಮಾಡಿದ್ದಾರೆ. ಈ ಕುರಿತು ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

ಸುರ