-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ತಡವಾಗಿ ಎಬ್ಬಿಸಿದ್ದೇ ತಪ್ಪಾಯ್ತು: ಹಲ್ಲೆಗೈದು ತಂದೆಯನ್ನೇ ಹತ್ಯೆ ಮಾಡಿದ ಪಾಪಿ ಪುತ್ರ

ತಡವಾಗಿ ಎಬ್ಬಿಸಿದ್ದೇ ತಪ್ಪಾಯ್ತು: ಹಲ್ಲೆಗೈದು ತಂದೆಯನ್ನೇ ಹತ್ಯೆ ಮಾಡಿದ ಪಾಪಿ ಪುತ್ರ



ತ್ರಿಶ್ಶೂರ್: ಮದ್ಯವ್ಯಸನಿ ಪುತ್ರನೊಬ್ಬ ತನ್ನ ತಂದೆಯನ್ನೇ ಹಲ್ಲೆಗೈದು ಹತ್ಯೆ ಮಾಡಿರುವ ಘಟನೆ ಕೇರಳದ ಚೆರ್ಪುವಿನ ಕೊಡನ್ನೂರುನಲ್ಲಿ ಶುಕ್ರವಾರ ನಡೆದಿದೆ.

ಕೊಡನ್ನೂರು ನಿವಾಸಿ ಜಾಯ್‌ (60) ಮೃತಪಟ್ಟ ದುರ್ದೈವಿ ತಂದೆ. ರಿಜೋ(25) ಕೃತ್ಯವೆಸಗಿದ ಪುತ್ರ.

ವೆಲ್ಡಿಂಗ್‌ ಕೆಲಸ ಮಾಡಿಕೊಂಡಿದ್ದ ರಿಜೋ ಶುಕ್ರವಾರ ಸಂಜೆ ಮದ್ಯದ ಮತ್ತಿನಲ್ಲಿ ಮನೆಗೆ ಬಂದಿದ್ದಾನೆ. 5 ಗಂಟೆ ಸುಮಾರಿಗೆ ಮನೆಗೆ ಬಂದಾ ಈತ ತಂದೆ ತಾಯಿಯಲ್ಲಿ ತನ್ನನ್ನು 8:15 ಕ್ಕೆ ಎಬ್ಬಿಸಿ ಎಂದು ಹೇಳಿ ಮಲಗಿದ್ದಾನೆ. ಆದರೆ ಅವರು ರಾತ್ರಿ 8:30 ಕ್ಕೆ ಎಬ್ಬಿಸಿದ್ದಾರೆ. ಆದ್ದರಿಂದ ತಡವಾಗಿ ಎಚ್ಚರಿಸಿದ್ದಕ್ಕೆ ರಾದ್ದಾಂತ ಮಾಡಿದ್ದಾನೆ. ಈ ವೇಳೆ ಆತನ ತಂದೆ ಜಾಯ್ ಎತ್ತರದ ಧ್ವನಿಯಲ್ಲಿ ಸುಮ್ಮನಿರು ಎಂದು ಹೇಳಿ ಸಮಾಧಾನ ಮಾಡಲು ಹೋಗಿದ್ದಾರೆ.

ಆದರೆ ತಂದೆಯ ಮಾತಿನಿಂದ ಸಿಟ್ಟಾದ ಪುತ್ರ ರಿಜೋ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಜಾಯ್ ಅವರು ನೆಲಕ್ಕೆ ಬಿದ್ದಿದ್ದಾರೆ. ಆಗ ಮತ್ತೆ ಹಲ್ಲೆ ಮಾಡಿದ್ದಾನೆ ರಿಜೊ. ಪರಿಣಾಮ ಗಂಭೀರ ಗಾಯಗೊಂಡ ಜಾಯ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ