kadaba:- ಕಡಬ ಪ್ರದೇಶದಲ್ಲಿ ಪ್ರಚಾರ ತೊಡಗಿದ ಸುಳ್ಯ ಎಎಪಿ ಅಭ್ಯರ್ಥಿ..

ಕಡಬ

ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ(AAP) ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್‌ ಅವರು ಕಡಬ ಪ್ರದೇಶದಲ್ಲಿ ಪ್ರಚಾರ ಕಾರ್ಯವನ್ನು ಭಾನುವಾರ ನಡೆಸಿದರು. 

ಕಡಬದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮತದಾರರನ್ನು  ಭೇಟಿಯಾದರು. ಆಮ್‌ ಆದ್ಮಿ ಪಕ್ಷದ ಅಭಿವೃದ್ಧಿ ಪರವಾದ ಕೆಲಸಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿದರು. 

ಪ್ರಚಾರ ಕಾರ್ಯದಲ್ಲಿ ಆಮ್‌ ಆದ್ಮಿ ಪಕ್ಷದ ಪ್ರಮುಖರಾದ ಜಯರಾಜ್‌, ಕಲಂದರ್‌ ಎಲಿಮಲೆ,  ಶಫಿ, ಸಂಶುದ್ದಿನ್ ಕೆ ಎಂ, ಶಿಲ್ಪಾ  ಇದ್ದರು.