ನಿಮಗೆ ಶನಿದೋಷ ಇದ್ದಲ್ಲಿ ಈ ರೀತಿಯ ಪರಿಹಾರಗಳನ್ನು ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗಬಹುದು..!


ಯಾವುದೇ ಕಾರಣಕ್ಕೂ ಯಾರೊಂದಿಗೂ ಅನುಚಿತವಾಗಿ ವರ್ತಿಸಬೇಡಿ. ನಿಯಮಗಳನ್ನು ಮೀರಿ ನಡೆದುಕೊಳ್ಳಬೇಡಿ. ಶಿಸ್ತುಗಳನ್ನು ಪಾಲಿಸಿ. ಸೋಮಾರಿಗಳು, ಅನುಚಿತವಾಗಿ ವರ್ತಿಸುವವರು ಮತ್ತು ನಿಯಮಗಳನ್ನು ಉಲ್ಲಂಘಿಸುವವರೂ ಶನಿಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. 


 ಅಂಗವಿಕಲರನ್ನು ಅವಮಾನಿಸಬೇಡಿ. ಅನಗವಿಕಲರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆ ನೀಡಬೇಡಿ. ಮಹಿಳೆಯರನ್ನು ಗೌರವಿಸಿ. 


 ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಬೆಳಗಿಸಿ. 
 ಕಪ್ಪು ಎಳ್ಳು, ಚರ್ಮದ ಪಾದರಕ್ಷೆಗಳು, ಉದ್ದು, ಕಪ್ಪು ಬಟ್ಟೆ, ಕಂಬಳಿ ಮುಂತಾದವುಗಳನ್ನು ಶನಿಗೆ ಸಂಬಂಧಿಸಿದ ವಸ್ತುಗಳು ಎಂದು ಹೇಳಲಾಗುತ್ತದೆ. ಹಾಗಾಗಿ ಈ ವಸ್ತುಗಳನ್ನು ದಾನ ಮಾಡಿ.  
BREAKING NEWS
Loading latest news...
Join our WhatsApp Channel Powered By : Online Pudu