-->
ಪೊಲೀಸ್ ಮನೆಗೆ ನುಗ್ಗಿದ ಖದೀಮ ಕಳ್ಳರು: ದೋಚಿ ಪರಾರಿ ಆಗುವ ವೇಳೆ ಅಡ್ಡಬಂದ ಎಎಸ್ಐ ಪುತ್ರನಿಗೇ ಗುಂಡೇಟು‌

ಪೊಲೀಸ್ ಮನೆಗೆ ನುಗ್ಗಿದ ಖದೀಮ ಕಳ್ಳರು: ದೋಚಿ ಪರಾರಿ ಆಗುವ ವೇಳೆ ಅಡ್ಡಬಂದ ಎಎಸ್ಐ ಪುತ್ರನಿಗೇ ಗುಂಡೇಟು‌

ಚಿಕ್ಕಬಳ್ಳಾಪುರ: ಪೊಲೀಸ್ ಮನೆಗೆ ನುಗ್ಗಿ ದರೋಡೆ ಮಾಡಿರುವ ಖದೀಮ ಕಳ್ಳರು, ಪರಾರಿ ಆಗುವ ವೇಳೆ ಅಡ್ಡ ಬಂದ ಎಎಸ್‌ಐ ಹಾಗೂ ಪುತ್ರನತ್ತ ಶೂಟ್ ಮಾಡಿದ್ದಾರೆ. ಪರಿಣಾಮ ಎಎಸ್‌ಐ ಪುತ್ರ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ . 

ಚಿಕ್ಕಬಳ್ಳಾಪುರ ತಾಲೂಕು ಪೇರೇಸಂದ್ರ ಗ್ರಾಮದ ನಿವಾಸಿ ಎಎಸ್‌ಐ ನಾರಾಯಣಸ್ವಾಮಿ ಮನೆ ಕಳ್ಳರು ನುಗ್ಗಿದ್ದಾರೆ. ನಾರಾಯಣಸ್ವಾಮಿಯವರು ಬಾಗೇಪಲ್ಲಿ ಠಾಣೆಯಲ್ಲಿ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮನೆಗೆ ನುಗ್ಗಿರುವ ಕಳ್ಳರು, ಮನೆಯಲ್ಲಿದ್ದ ಎಎಸ್‌ಐ ಪತ್ನಿ ಹಾಗೂ ಸೊಸೆಗೆ ಬೆದರಿಸಿ ಮಾಂಗಲ್ಯ ಸರ ದೋಚಿದ್ದಾರೆ. ಅಲ್ಲದೆ ನಗದು - ಚಿನ್ನಾಭರಣ ಸುಲಿಗೆ ಮಾಡಿಕೊಂಡು ಪರಾರಿಯಾಗಲು ಮುಂದಾಗಿದ್ದಾರೆ. 

ಆದರೆ ಅದೇ ಸಮಯಕ್ಕೆ ಹೊರಗಡೆಯಿಂದ ಬಂದಿರುವ ಎಎಸ್‌ಐ ನಾರಾಯಣಸ್ವಾಮಿ ಹಾಗೂ ಪುತ್ರ ಮನೆಗೆ ಬಂದಿದ್ದಾರೆ. ತಕ್ಷಣ ಅವರು ಕಳ್ಳರನ್ನು ತಡೆದು ಹಿಡಿಯಲು ಯತ್ನಿಸಿದ್ದಾರೆ. ಆಗ ಇವರತ್ತ ಕಳ್ಳರು ಗುಂಡು ಹಾರಿಸಿದ್ದಾರೆ. ಈ ವೇಳೆ ಎಎಸ್ಐ ಪುತ್ರ ಶರತ್‌ಗೆ ಗುಂಡೇಟು ತಗುಲಿದ್ದು, ಅವರಯ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೇರೇಸಂದ್ರ ಪೊಲೀಸರ ಭೇಟಿ ನೀಡಿ , ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article