ಮಂಗಳೂರು: ಸರಕು ಸಾಗಾಟದ ಮೂರು ಬೋಟ್ ಗಳಲ್ಲಿನ ಬೆಂಕಿ ಅವಘಡದಲ್ಲಿ 2.50 ಕೋಟಿ ರೂ.‌ನಾಶ - ನಷ್ಟ


ಮಂಗಳೂರು: ನಗರದ ಕಸಬಾ ಬೆಂಗ್ರೆಯಲ್ಲಿ ಶುಕ್ರವಾರ ಸಂಭವಿಸಿರುವ ಬೆಂಕಿ ಅವಘಡದಲ್ಲಿ ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ಮೂರು ಬೋಟ್ ಗಳು ಸುಟ್ಟು ಕರಕಲಾಗಿದ್ದು, ಸುಮಾರು 2.50 ಕೋ.ರೂ. ನಾಶ ನಷ್ಟವಾಗಿದೆ ಎಂದು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ದುರಸ್ತಿಗೆಂದು ನಿಲ್ಲಿಸಿದ್ದ ಈ ಬೋಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು‌. ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ ಪರಿಣಾಮ ಪಕ್ಕದಲ್ಲಿದ್ದ ಇತರ ಎರಡು ಸಣ್ಣ ಹಡಗಳಿಗೂ ಬೆಂಕಿ ಆವರಿಸಿತ್ತು. ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿತ್ತು. 

ಈ ದುರ್ಘಟನೆಯಿಂದ ಮುಹಮ್ಮದ್ ರಫೀಕ್ ಎಂಬವರಿಗೆ ಸೇರಿದ್ದ ಮನೆ ಹಾಗೂ ಅಬ್ದುಸ್ಸಮದ್‌ಗೆ ಸೇರಿದ ಒಣಮೀನು ದಾಸ್ತಾನಿಡುವ ಶೆಡ್‌ಗೂ ಹಾನಿಯಾಗಿತ್ತು. ಪರಿಣಾಮ ಒಟ್ಟು 2.50 ಕೋ.ರೂ. ನಷ್ಟವಾಗಿದೆ ಎಂದು ಹಡಗು ರಿಪೇರಿ ಯಾರ್ಡ್‌ನ ವಾಚ್‌ಮ್ಯಾನ್ ಮುಹಮ್ಮದ್ ಶರೀಫ್ ಪಣಂಬೂರು ಪೊಲೀಸರಿಗೆ ದೂರು ನೀಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu