-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರು: ಸರಕು ಸಾಗಾಟದ ಮೂರು ಬೋಟ್ ಗಳಲ್ಲಿನ ಬೆಂಕಿ ಅವಘಡದಲ್ಲಿ 2.50 ಕೋಟಿ ರೂ.‌ನಾಶ - ನಷ್ಟ

ಮಂಗಳೂರು: ಸರಕು ಸಾಗಾಟದ ಮೂರು ಬೋಟ್ ಗಳಲ್ಲಿನ ಬೆಂಕಿ ಅವಘಡದಲ್ಲಿ 2.50 ಕೋಟಿ ರೂ.‌ನಾಶ - ನಷ್ಟ


ಮಂಗಳೂರು: ನಗರದ ಕಸಬಾ ಬೆಂಗ್ರೆಯಲ್ಲಿ ಶುಕ್ರವಾರ ಸಂಭವಿಸಿರುವ ಬೆಂಕಿ ಅವಘಡದಲ್ಲಿ ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ಮೂರು ಬೋಟ್ ಗಳು ಸುಟ್ಟು ಕರಕಲಾಗಿದ್ದು, ಸುಮಾರು 2.50 ಕೋ.ರೂ. ನಾಶ ನಷ್ಟವಾಗಿದೆ ಎಂದು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ದುರಸ್ತಿಗೆಂದು ನಿಲ್ಲಿಸಿದ್ದ ಈ ಬೋಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು‌. ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ ಪರಿಣಾಮ ಪಕ್ಕದಲ್ಲಿದ್ದ ಇತರ ಎರಡು ಸಣ್ಣ ಹಡಗಳಿಗೂ ಬೆಂಕಿ ಆವರಿಸಿತ್ತು. ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿತ್ತು. 

ಈ ದುರ್ಘಟನೆಯಿಂದ ಮುಹಮ್ಮದ್ ರಫೀಕ್ ಎಂಬವರಿಗೆ ಸೇರಿದ್ದ ಮನೆ ಹಾಗೂ ಅಬ್ದುಸ್ಸಮದ್‌ಗೆ ಸೇರಿದ ಒಣಮೀನು ದಾಸ್ತಾನಿಡುವ ಶೆಡ್‌ಗೂ ಹಾನಿಯಾಗಿತ್ತು. ಪರಿಣಾಮ ಒಟ್ಟು 2.50 ಕೋ.ರೂ. ನಷ್ಟವಾಗಿದೆ ಎಂದು ಹಡಗು ರಿಪೇರಿ ಯಾರ್ಡ್‌ನ ವಾಚ್‌ಮ್ಯಾನ್ ಮುಹಮ್ಮದ್ ಶರೀಫ್ ಪಣಂಬೂರು ಪೊಲೀಸರಿಗೆ ದೂರು ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ