-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಾಸರಗೋಡು: ತೆಂಗಿನಮರ ಮೈಮೇಲೆಯೇ ಮುರಿದುಬಿದ್ದು ಬಾಲಕ ಮೃತ್ಯು

ಕಾಸರಗೋಡು: ತೆಂಗಿನಮರ ಮೈಮೇಲೆಯೇ ಮುರಿದುಬಿದ್ದು ಬಾಲಕ ಮೃತ್ಯು

ಕಾಸರಗೋಡು: ಭಾರೀ ಸುಂಟರಗಾಳಿ ಪರಿಣಾಮ ತೆಂಗಿನಮರ ಮೈಮೇಲೆಯೇ ಮುರಿದುಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕನೋರ್ವನು ಮೃತಪಟ್ಟ ದುರ್ಘಟನೆಯೊಂದು ಕಾಸರಗೋಡು ಜಿಲ್ಲೆಯ ಕಯ್ಯಾರದಲ್ಲಿ ನಡೆದಿದೆ.

ವಾರ್ತಾಭಾರತಿ ಪತ್ರಿಕೆ, ಡೈಜಿವರ್ಲ್ಡ್ ಚ್ಯಾನೆಲ್ ನ ಕಾಸರಗೋಡು ವರದಿಗಾರ, ಕಯ್ಯಾರ ನಿವಾಸಿ ಸ್ಟೀಫನ್ ಕ್ರಾಸ್ತಾ ಅವರ ಪುತ್ರ ಸೋನು ಕ್ರಾಸ್ತ(13) ಮೃತಪಟ್ಟ ಬಾಲಕ.

8ನೇ ತರಗತಿಯ ವಿದ್ಯಾರ್ಥಿ ಸೋನು ಕ್ರಾಸ್ತ ಇಂದು ಮಧ್ಯಾಹ್ನ ಮನೆಯ ಬಳಿಯ ತೋಟದಲ್ಲಿದ್ದ ಸಂದರ್ಭ ಸುಂಟರಗಾಳಿಗೆ ಸಿಲುಕಿದ ತೆಂಗಿನಮರವೊಂದು ಮುರಿದು ಬಿದ್ದು ಆತನ ಮೇಲೆಯೇ ಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

Ads on article

Advertise in articles 1

advertising articles 2

Advertise under the article