-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮೇ 30ರಂದು ಊಹಿಸಲಾಗದ ಘಟನೆ ನಡೆದೋಯ್ತು: ಸರೀ ಒಂದು ತಿಂಗಳ ಬಳಿಕ ಆಕೆ ಇಹಲೋಕ ತ್ಯಜಿಸಿದಳು‌

ಮೇ 30ರಂದು ಊಹಿಸಲಾಗದ ಘಟನೆ ನಡೆದೋಯ್ತು: ಸರೀ ಒಂದು ತಿಂಗಳ ಬಳಿಕ ಆಕೆ ಇಹಲೋಕ ತ್ಯಜಿಸಿದಳು‌

ಪಾಲಕ್ಕಾಡ್: ಸಣ್ಣ ಕುಟುಂಬ, ತಂದೆ - ತಾಯಿ, ಇಬ್ಬರು ಸೋದರರು, ಮನೆಗೊಬ್ಬಳೇ ಮಗಳು. ಆದರೆ ಅವರಾರು ಊಹಿಸದ ಘಟನೆಯೊಂದು ಆಕೆಯ ಬಾಳಿನಲ್ಲಿ ನಡೆದೇ ಹೊಯ್ತು. ಆದರೆ ಅದಾಗಿ ಸರೀ ಒಂದು ತಿಂಗಳಿಗೆ ಆಕೆ ಈ ಲೋಕವನ್ನೇ ತ್ಯಜಿಸಿದಳು‌. 

ಹೌದು ಪಾಲಕ್ಕಾಡ್ ನಿವಾಸಿ ಶ್ರೀಲಕ್ಷ್ಮೀ(18) ಎಂಬಾಕೆಯ ವಿಚಾರವನ್ನು ನಾವೀಗ ಹೇಳ ಹೊರಟಿದ್ದು. ಸುಗುನನ್- ಸಿಂಧೂ ದಂಪತಿಯ ಪುತ್ರಿ, ಇಬ್ಬರು ಸೋದರರ ಮುದ್ದಿನ ಸಹೋದರಿ ಈಕೆ. ಮೇ 30ರಂದು ಎಂದಿನಂತೆ ಈಕೆ ಕಾಲೇಜಿಗೆ ಹೋಗುತ್ತಿದ್ದಳು. ಆದರೆ ಪಕ್ಕದ ಮನೆಯ ನಾಯಿ ಈಕೆಗೆ ಕಚ್ಚಿದೆ. ಆರೋಗ್ಯ ಇಲಾಖೆಯ ಎಲ್ಲಾ ರೀತಿಯ ಚಿಕಿತ್ಸೆಯನ್ನು ಶ್ರೀಲಕ್ಷ್ಮೀ ಪಡೆದುಕೊಂಡು ಇದ್ದಳು.

ಆದರೆ ಅದೇನಾಯ್ತೋ ಗೊತ್ತಿಲ್ಲ, ಈ ನಡುವೆ ಕೆಲ ದಿನಗಳ ಹಿಂದೆ ಶ್ರೀಲಕ್ಷ್ಮೀ ಜ್ವರದಿಂದ ಬಳಲಾರಂಭಿಸಿದಳು. ಖಾಸಗಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯಲಾಯ್ತು. ತಪಾಸಣೆ ಮಾಡಿದ ವೈದ್ಯರು ಆಕೆಗೆ ರೇಬಿಸಿ ರೋಗ ಕಾಡುತ್ತಿದೆ ಎಂದರು. ತಕ್ಷಣ ತ್ರಿಶ್ಶೂರ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು. ಆದರೆ ಜೂ 30ರಂದು ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Ads on article

Advertise in articles 1

advertising articles 2

Advertise under the article