-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮದುವೆಗೆ ಇನ್ನೇನು ಎರಡು ದಿನ ಇರುವಾಗಲೇ ಕಾಮುಕ ವರ ಮಾಡಿದ್ದೇನು ಗೊತ್ತೇ?

ಮದುವೆಗೆ ಇನ್ನೇನು ಎರಡು ದಿನ ಇರುವಾಗಲೇ ಕಾಮುಕ ವರ ಮಾಡಿದ್ದೇನು ಗೊತ್ತೇ?

ನಾಗ್ಪುರ​(ಮಹಾರಾಷ್ಟ್ರ): ತನ್ನ ವಿವಾಹಕ್ಕೆ ಇನ್ನೇನು ಕೇವಲ ಎರಡೇ ದಿನ ಇರುವಾಗಲೇ ಕಾಮುಕನೋರ್ವನು ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಾಗ್ಪುರದ ಗಿಟ್ಟಿಖಾಡನ್​​​ನಲ್ಲಿ  ನಡೆದಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಭಾರತೀಯ ವಾಯುಸೇನೆಯಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಆದಿತ್ಯಧನರಾಜ್​ ನರೇಶ್​ ಶಾಹು(28) ಎಂಬಾತ ಬಂಧಿತ ಆರೋಪಿ.

ಆರೋಪಿ ಆದಿತ್ಯ ಧನರಾಜ್​ ನರೇಶ್​ ಶಾಹು ವಾಯುಪಡೆಯಲ್ಲಿ ಕಾರ್ಪೋರಲ್​ ಆಗಿ ಸೇವೆ ಸಲ್ಲಿಸುತ್ತಿದ್ದನು. ಈತನಿಗೆ ಮೇ 12ರಂದು ಮದುವೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಈತ ರಜೆಯ ಮೇಲೆ ಊರಿಗೆ ಬಂದಿದ್ದನು. ಮದುವೆಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿಯೇ ಅದೇ ಗ್ರಾಮದ ಮನೆಯೊಂದಕ್ಕೆ ನುಗ್ಗಿ 15ರ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಯಾರಿಗಾದರೂ ಈ ಬಗ್ಗೆ ಹೇಳಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ.

ಪೋಷಕರು ಮನೆಗೆ ವಾಪಸ್​ ಆದ ಸಂದರ್ಭ ತನ್ನ ಮೇಲೆ ಕಾಮುಕ ಎಸಗಿರುವ ದುಷ್ಕೃತ್ಯದ ಬಗ್ಗೆ ಬಾಲಕಿ ಹೇಳಿಕೊಂಡಿದ್ದಾಳೆ. ತಕ್ಷಣ ಆಕೆಯ ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. 

ಆದಿತ್ಯಧನರಾಜ್​ ಮದುವೆಯಾಗಲಿರುವ ಯುವತಿ ಬೇರೊಂದು ರಾಜ್ಯದವಳಾಗಿದ್ದಳು.  ಇವರ ಮದುವೆ ನಾಗ್ಪುರ​​ದಲ್ಲಿ ನಿಯೋಜನೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಧು ಹಾಗೂ ಆಕೆಯ ಕುಟುಂಬಸ್ಥರು ನಾಗ್ಪುರಕ್ಕೆ ಆಗಮಿಸಿದ್ದರು. ನಾಗ್ಪುರಕ್ಕೆ ಬರುತ್ತಿದ್ದಂತೆ ಆದಿತ್ಯಧನರಾಜ್ ಮಾಡಿರುವ ಕೃತ್ಯದ ಬಗ್ಗೆ ಅವರಿಗೆ ತಿಳಿದು ಬಂದಿದ್ದು, ಅವರು ದಿಢೀರ್​ ಶಾಕ್​​​ಗೊಳಗಾಗಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ