-->

ನಿಶ್ಚಿತಾರ್ಥಕ್ಕೆ ಹಾಲ್ ಬುಕ್ ಮಾಡಿ ಬರುತ್ತಿದ್ದ ತಂದೆ -ಮಗಳಿಬ್ಬರೂ ಟ್ರಾನ್ಸ್ ಫರ್ ಸ್ಪೋಟಗೊಂಡು ಗಂಭೀರ ಗಾಯ!

ನಿಶ್ಚಿತಾರ್ಥಕ್ಕೆ ಹಾಲ್ ಬುಕ್ ಮಾಡಿ ಬರುತ್ತಿದ್ದ ತಂದೆ -ಮಗಳಿಬ್ಬರೂ ಟ್ರಾನ್ಸ್ ಫರ್ ಸ್ಪೋಟಗೊಂಡು ಗಂಭೀರ ಗಾಯ!

ಬೆಂಗಳೂರು: ಈ ಒಂದು ದುರಂತ ಸಂಭವಿಸದಿದ್ದಲ್ಲಿ ಮುಂದಿನ ವಾರವೇ ಈ ಯುವತಿಗೆ ನಿಶ್ಚಿತಾರ್ಥ ನೆರವೇರುತ್ತಿತ್ತು. ಆದರೆ ರಸ್ತೆ ಸಂಚಾರದ ವೇಳೆ ಸಂಭವಿಸಿರುವ ಅದೊಂದು ಸ್ಫೋಟ ಆಕೆಯ ಸಂತೋಷಕ್ಕೆ ಬೆಂಕಿ ಇಟ್ಟಿದೆ. ಇದೀಗ ಬೆಂಕಿಯಲ್ಲಿ ಬೆಂದ ಗಾಯಗಳಿಂದ ತಂದೆ - ಮಗಳಿಬ್ಬರೂ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ಮಾಡುವಂತಾಗಿದೆ. 

ಶಿವರಾಜ್ ಹಾಗೂ ಅವರ ಪುತ್ರಿ ಚೈತನ್ಯ (18) ಇಬ್ಬರಿಗೂ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡವರು. 

ಇವರಿಬ್ಬರೂ ನಿಶ್ಚಿತಾರ್ಥಕ್ಕೆ ಹಾಲ್ ಬುಕ್ ಮಾಡಿ ಬರುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ತಂದೆ - ಮಗಳಿಬ್ಬರೂ ಮಂಗನಹಳ್ಳಿ ಬಳಿ ಹಂಪ್ಸ್ ಹತ್ತಿರ ಬರುತ್ತಿದ್ದರು. ಆಗ ವಾಹನದ ವೇಗವನ್ನು ತಗ್ಗಿಸಿದ್ದಾರೆ‌. ಅದೇ ಸಂದರ್ಭದಲ್ಲೇ ಅಲ್ಲಿದ್ದ ಟ್ರಾನ್ಸ್​ಫಾರ್ಮರ್ ಸ್ಫೋಟಗೊಂಡಿದೆ. ಪರಿಣಾಮ ಅದರಿಂದ ಬೆಂಕಿ ಸಿಡಿದಿದೆ. ಇದರಿಂದ ಇಬ್ಬರಿಗೂ ಬೆಂಕಿ ಹತ್ತಿಕೊಂಡಿದೆ.

ಇದೀಗ ಬೆಂಕಿ ಹತ್ತಿ ಗಂಭೀರ ಗಾಯಗೊಂಡ ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಯಾಣ ಮಂಟಪ ಬುಕ್ ಮಾಡಿ, ಒಂದಿಷ್ಟು ಬಟ್ಟೆ ಖರೀದಿಸಿಕೊಂಡು ಬರುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ. ರಾಜಧಾನಿ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು, ಈ ಅವಘಡಕ್ಕೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಸಂಬಂಧಿಕರು, ಬೆಸ್ಕಾಂ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. 

Ads on article

Advertise in articles 1

advertising articles 2

Advertise under the article