-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮತ್ತೆ ಒಂದಾದ ಆಮೀರ್ ಖಾನ್ - ಕಿರಣ್ ರಾವ್ ದಂಪತಿ: ಸಿನಿಮಾ ನಿರ್ಮಾಣವೇ ಇದಕ್ಕೆಲ್ಲಾ ಕಾರಣವಂತೆ!!!

ಮತ್ತೆ ಒಂದಾದ ಆಮೀರ್ ಖಾನ್ - ಕಿರಣ್ ರಾವ್ ದಂಪತಿ: ಸಿನಿಮಾ ನಿರ್ಮಾಣವೇ ಇದಕ್ಕೆಲ್ಲಾ ಕಾರಣವಂತೆ!!!

ಮುಂಬೈ: ಮುಂದೆ ದಂಪತಿಯಾಗಿರೋಲ್ಲ, ಬದಲಾಗಿ ಪುತ್ರನಿಗೆ ತಂದೆ-ತಾಯಿಯಾಗಿರುತ್ತೇವೆ ಎನ್ನುವ ಮೂಲಕ ಆಮೀರ್‌ ಖಾನ್‌ ಹಾಗೂ ಅವರ ಎರಡನೆಯ ಪತ್ನಿ ಕಿರಣ್‌ ರಾವ್‌ ದಂಪತಿ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಕೆಲ ತಿಂಗಳ ಹಿಂದೆ ಇತಿಶ್ರೀ ಹಾಡಿ ವಿಚ್ಛೇದನ ಪಡೆದು ಭಾರಿ ಸುದ್ದಿಯಾಗಿದ್ದರು. 

ಈ ನಡುವೆ ಆಮೀರ್‌ ಖಾನ್‌ ತಮ್ಮ ಮಗಳ ವಯಸ್ಸಿನಾಕೆಯೊಂದಿಗೆ ಮೂರನೆಯ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಈ ವಿಚಾರವನ್ನು ನಟ‌ ಆಮೀರ್ ಖಾನ್ ಅಲ್ಲಗಳೆದೂ ಇರಲಿಲ್ಲ. 
ಸದ್ಯ ಆ ಮದುವೆಯ ಪ್ರಸ್ತಾಪವನ್ನು ಬದಿಗಿಟ್ಟಿರುವ ನಟ ಆಮೀರ್‌ ಖಾನ್‌ ತಮ್ಮ ವಿಚ್ಛೇದಿತ ಪತ್ನಿ ಕಿರಣ್‌ರೊಂದಿಗೆ ಮತ್ತೆ ದಾಂಪತ್ಯ ಜೀವನವನ್ನು ಮುಂದುವರೆಸಲಿದ್ದಾರಂತೆ. 

ಇಬ್ಬರೂ ಜೊತೆಗಿರುವ ಫೋಟೋಗಳನ್ನು ಅವರು ಶೇರ್‌ ಮಾಡಿಕೊಂಡು ಅಭಿಮಾನಿಗಳು ಸೇರಿದಂತೆ ಇತರರನ್ನು ಅಚ್ಚರಿಗೊಳಿಸಿದ್ದಾರೆ‌‌. ಈ ಫೋಟೋಗೆ ನೆಟ್ಟಿಗರಿಂದ ಭಾರೀ ಕಮೆಂಟ್‌ಗಳು ಬರುತ್ತಿವೆ

ಅಷ್ಟಕ್ಕೂ ಈ ಭಾರೀ ನಿರ್ಧಾರದ ಹಿಂದೆ ಸಿನಿಮಾ ನಿರ್ಮಾಣದ ಉದ್ದೇಶವಿದೆಯಂತೆ. 2011ರಲ್ಲಿ ಬಿಡುಗಡೆಯಾಗಿದ್ದ ಬಹಳ ಖ್ಯಾತ ಸಿನಿಮಾ ‘ಧೋಬಿ ಘಾಟ್​’ ಅನ್ನು ನಿರ್ದೇಶನ ಮಾಡಿದ್ದವರು ಆಮೀರ್‌ ಪತ್ನಿ ಕಿರಣ್​ ರಾವ್​. ಇದಾದ ಬಳಿಕ ಮತ್ತೆ ಅವರು ಯಾವುದೇ ಸಿನಿಮಾ ನಿರ್ದೇಶನವನ್ನು ಮಾಡಿರಲಿಲ್ಲ. ಇದೀಗ ಪತಿಯಿಂದ ವಿಚ್ಛೇದನ ಪಡೆದ ಬಳಿಕ ಮತ್ತೆ ನಿರ್ದೇಶನದತ್ತ ಮರಳುವ ಮನಸ್ಸು ಮಾಡಿದ್ದರಂತೆ. ಈ ನಿರ್ಧಾರವೇ ಮತ್ತೆ ದಂಪತಿಯನ್ನು ಒಂದು ಮಾಡಿದೆಯಂತೆ.

ಈ ಸಿನಿಮಾ ಚಿತ್ರೀಕರಣವನ್ನು ಕಿರಣ್‌ ರಾವ್, ಪುಣೆಯಲ್ಲಿ ಆರಂಭಗೊಳಿಸಿರುವುದಾಗಿ ‘ಬಾಲಿವುಡ್‌ ಹಂಗಾಮಾ’ ವರದಿ ಮಾಡಿದೆ. ಈ ಸಿನಿಮಾವು ಜನವರಿ 20ರವರೆಗೆ ಪುಣೆಯ ಸಮೀಪ ಚಿತ್ರೀಕರಣವಾಗಲಿದೆ. ಆ ಬಳಿಕ ಮಹಾರಾಷ್ಟ್ರದ ನಾನಾ ಕಡೆಗಳಲ್ಲಿ ಚಿತ್ರೀಕರಣ​ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಎಪ್ರಿಲ್​ ವೇಳೆಗೆ ಸಿನಿಮಾ ಶೂಟಿಂಗ್​ ಸಂಪೂರ್ಣಗೊಳಿಸುವ ನಿರ್ಧಾರವನ್ನು ಸಿನಿಮಾ ತಂಡ ಹೊಂದಿದೆ ಎನ್ನಲಾಗಿದೆ. ಹಾಸ್ಯ ಕಥಾನವವನ್ನು ಈ ಚಿತ್ರ ಹೊಂದಿದೆ. ಈ ಸಿನಿಮಾದ ಸಂಪೂರ್ಣ ಜವಾಬ್ದಾರಿಯನ್ನು ಆಮೀರ್‌ ಖಾನ್‌ ಹೊತ್ತುಕೊಂಡಿದ್ದಾರೆ. ಆದ್ದರಿಂದಲೇ ಈ ದಂಪತಿ ಮತ್ತೆ ಒಂದಾಗಿದ್ದಾರೆ ಎನ್ನಲಾಗಿದೆ. 

ಈ ಮಧ್ಯೆ ಆಮೀರ್ ಖಾನ್​ ನಟನೆಯ ‘ಲಾಲ್​ ಸಿಂಗ್ ಛಡ್ಡಾ’ ಸಿನಿಮಾವನ್ನು ಈ ದಂಪತಿ ಒಟ್ಟಾಗಿ ನಿರ್ಮಾಣ ಮಾಡುತ್ತಿದ್ದು, ಕೊರೊನಾ ಕಾರಣದಿಂದ ಬಿಡುಗಡೆ ಮುಂದೂಡಲ್ಪಟ್ಟಿದೆ. ಎಪ್ರಿಲ್​ 14ರಂದು ತೆರೆಗೆ ಬರುವ ನಿರೀಕ್ಷೆಯಿದೆ.

Ads on article

Advertise in articles 1

advertising articles 2

Advertise under the article

ಸುರ