-->

ಪ್ರೀತಿಸಿದವನನ್ನೇ ಮುದುವೆಯಾಗಲು ಅತ್ಯಾಚಾರದ ಕತೆ ಕಟ್ಟಿದ ಯುವತಿ: ಬೇಸ್ತು ಬಿದ್ದ ಪೊಲೀಸರು

ಪ್ರೀತಿಸಿದವನನ್ನೇ ಮುದುವೆಯಾಗಲು ಅತ್ಯಾಚಾರದ ಕತೆ ಕಟ್ಟಿದ ಯುವತಿ: ಬೇಸ್ತು ಬಿದ್ದ ಪೊಲೀಸರು

ನಾಗ್ಪುರ ​(ಮಹಾರಾಷ್ಟ್ರ): ಸಾಮೂಹಿಕ ಅತ್ಯಾಚಾರದ ಯುವತಿಗೆ ಶೀಘ್ರ ನ್ಯಾಯ ದೊರಕಿಸಲು ಹೋಗಿ ಸಾವಿರಾರು ಮಂದಿ ಸಿಬ್ಬಂದಿಯಿಂದ ತನಿಖೆ ನಡೆಸಲು ಹೋಗಿ ಕೊನೆಗೇ ಪೊಲೀಸರೇ ಬೇಸ್ತು ಬಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಈ ಘಟನೆಯಿಂದ ಪೊಲೀಸ್‌ ಇಲಾಖೆ ಮಾತ್ರವಲ್ಲದೇ ಸಾಮೂಹಿಕ ಅತ್ಯಾಚಾರದ ತನಿಖೆಗಿಳಿದ ಪೊಲೀಸ್ ಸಿಬ್ಬಂದಿಯೂ ಸುಸ್ತಾಗಿದ್ದಾರೆ. 

19 ವರ್ಷದ ಯುವತಿಯೋರ್ವಳು ತನ್ನ ಮೇಲೆ ಗ್ಯಾಂಗ್ ರೇಪ್ ಆದ ಬಗ್ಗೆ  ಪೊಲೀಸ್ ದೂರು ದಾಖಲು ಮಾಡಿದ್ದಾಳೆ. ನಾಗ್ಪುರ್​​ದ ಚಿಖಾಲಿ ಸಮೀಪ ತಾನು ಸಂಗೀತಾಭ್ಯಾಸ ತರಗತಿಗೆ ತೆರಳುತ್ತಿದೆ. ಈ ಸಂದರ್ಭ ವ್ಯಾನ್​​ನಲ್ಲಿ ಬಂದ ಯುವಕರು ನನ್ನನ್ನು ಬಲವಂತವಾಗಿ ಎಳೆದೊಯ್ದು ನಿರ್ಜನ ಪ್ರದೇಶದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಳು. 

ತಕ್ಷಣ ಪ್ರಕರಣ ದಾಖಲಿಸಿಕೊಂಡ ‍ಪೊಲೀಸರು ಇರುವ ಕೆಲಸವನ್ನೆಲ್ಲಾ ಬದಿಗಿಟ್ಟು, ಸಂತ್ರಸ್ತೆಗೆ ಶೀಘ್ರ ನ್ಯಾಯ ಕೊಡಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ನಾಗ್ಪುರ್​​ ಪೊಲೀಸ್​ ಕಮಿಷನರ್​​ ಅಮಿತೇಶ್ ಕುಮಾರ್​ ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ತನಿಖೆಯಲ್ಲಿ ಭಾಗಿಯಾದ್ದರು. ಯುವತಿ ಹೇಳಿರುವ ಸ್ಥಳದಲ್ಲಿ ಇರುವ 250ಕ್ಕೂ ಅಧಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಎಲ್ಲಿಯೂ ಅಪಹರಣದ ಕುರುಹು ದೊರಕಲಿಲ್ಲ. 

ಈ ನಡುವೆ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವರದಿ ಕೂಡಾ ಶೀಘ್ರದಲ್ಲಿ ಬಂದಿದ್ದು, ಆದರೆ ವರದಿಯು ಅತ್ಯಾಚಾರ ನಡೆದೇ ಇಲ್ಲ ಎಂದು ಹೇಳಿತು. ಇದರಿಂದ ಅನುಮಾನಗೊಂಡ ಪೊಲೀಸರು ಯುವತಿಯನ್ನು ತಮ್ಮದೇ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ಆಗ ಹೆದರಿದ ಯುವತಿ ಸತ್ಯ ಬಾಯಿ ಬಿಟ್ಟಿದ್ದಾಳೆ. 

ಅದೇನೆಂದರೆ ಆಕೆ ಯುವಕನೋರ್ವನನ್ನು ಪ್ರೀತಿಸುತ್ತಿದ್ದಾಳೆ. ಆದರೆ ಮನೆಯಲ್ಲಿ ಈ ಮದುವೆಗೆ ವಿರೋಧ ಬರುಬಹುದು ಎಂದು ಅನ್ನಿಸಿದೆ. ಅದಕ್ಕಾಗಿ ತನ್ನನ್ನು ಯಾರಾದರೂ ಅತ್ಯಾಚಾರ ಮಾಡಿದ್ದಾರೆ ಎಂದು ಸುದ್ದಿಯಾದರೆ ಯಾರೂ ತನ್ನನ್ನು ಮದುವೆಯಾಗಲು ಮುಂದೆ ಬರುವುದಿಲ್ಲ. ಆಗ ತಾನು ಪ್ರೀತಿಸಿದವನ ಜತೆ ಮದುವೆಯಾಗಬಹುದು ಎಂದು ಈ ತರಹ ಕತೆ ಕಟ್ಟಿದ್ದಾಳೆ. ಈಕೆಯ ಈ ಪ್ಲ್ಯಾನ್ ನಿಂದ ನಿಜವಾಗಿಯೂ ಪೊಲೀಸರು ಬೇಸ್ತು ಬಿದ್ದಿದ್ದಾರೆ.

Ads on article

Advertise in articles 1

advertising articles 2

Advertise under the article