-->

ಪಿಎಸ್ಐ ಕಾಮಕಾಂಡವನ್ನು ಬಯಲಿಗೆಳೆದ ಹೆಡ್ ಕಾನ್ ಸ್ಟೇಬಲ್: ಪದೇ ಪದೆ ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದ ಆರೋಪ

ಪಿಎಸ್ಐ ಕಾಮಕಾಂಡವನ್ನು ಬಯಲಿಗೆಳೆದ ಹೆಡ್ ಕಾನ್ ಸ್ಟೇಬಲ್: ಪದೇ ಪದೆ ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದ ಆರೋಪ

ಬೆಂಗಳೂರು: ನೆರೆಮನೆಯವರೊಳಗಿನ ಜಗಳಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸ್ ಠಾಣೆಗೆ ಕರೆತಂದು ದೌರ್ಜನ್ಯ ಎಸಗಿದ್ದಾರೆಂದು ಆರೋಪ ಹೊತ್ತಿರುವ ಬ್ಯಾಟರಾಯನಪುರ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ಹರೀಶ್​ ವಿರುದ್ಧ ಮತ್ತೊಂದು ಸ್ಫೋಟಕ ವಿಚಾರ ವೈರಲ್​ ಆಗಿದೆ‌. ಎಸ್​ಐ ಹರೀಶ್ ಅವರು, ಮುಖ್ಯಪೇದೆಯೊಬ್ಬರಲ್ಲಿ, ಪದೇ ಪದೆ ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದರೆಂಬ ವಿಚಾರ ಬಹಿರಂಗಗೊಂಡಿದೆ. 

ಇತ್ತೀಚಿಗೆ ನೆರೆಮನೆಯವರೊಂದಿಗಿನ ಜಗಳ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೌಸೀಫ್​ ಪಾಷಾ ಎಂಬಾತನ್ನು ಎಸ್​ಐ ಹರೀಶ್​ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಆದರೆ ಅವರು ಎಫ್​ಐಆರ್​ ದಾಖಲಿಸದೆ ಆತನಿಗೆ ಮನಸೋ ಇಚ್ಛೆ ಥಳಿಸಿದ್ದರು. ಕುಡಿಯಲು ನೀರು ಕೇಳಿದರೆ ಬಾಟಲ್​ಗೆ ಮೂತ್ರ ತುಂಬಿಸಿ ನೀಡಿದ್ದರು. ಆತನ ಗಡ್ಡ ಬೋಳಿಸಿ ಅಮಾನವೀಯವಾಗಿ ವರ್ತಿಸಿದ್ದಾರೆಂದು ಮಾನವ ಹಕ್ಕುಗಳ ಕಾರ್ಯಕರ್ತರೊಬ್ಬರು ಟ್ವಿಟರ್​ನಲ್ಲಿ ಪಶ್ಚಿಮ ವಿಭಾಗದ ಡಿಸಿಪಿಗೆ ದೂರು ನೀಡಿದ್ದರು. 

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿಪಿ ಸಂಜೀವ ಪಾಟೀಲ್​, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಕೆಂಗೇರಿ ಉಪ ವಿಭಾಗದ ಎಸಿಪಿ ಕೋದಂಡರಾಮಯ್ಯನವರಿಗೆ ಸೂಚನೆ ನೀಡಿದ್ದಾರೆ. ತೌಸೀಫ್​ ಹಾಗೂ ಎಸ್​ಐ ಹರೀಶ್​ ಅವರನ್ನು ವಿಚಾರಣೆ ನಡೆಸಿರುವ ಎಸಿಪಿ, ತನಿಖೆ ಮುಕ್ತಾಯಗೊಳಿಸಿದ್ದು, ಇಂದು ಡಿಸಿಪಿಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ. 

ಇದರ ಬೆನ್ನಲ್ಲೇ ಪಿಎಸ್ಐ ಹರೀಶ್​ ಅವರು ಹೆಡ್‌ ಕಾನ್ ಸ್ಟೇಬಲ್ ಬಳಿ ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದರು ಎಂಬ ಆಡಿಯೋವೊಂದು ವೈರಲ್​ ಆಗಿದೆ. ಬ್ಯಾಟರಾಯನಪುರ ಹೊಯ್ಸಳ ಬೀಟ್​ನಲ್ಲಿದ್ದ ಮುಖ್ಯಪೇದೆ ಮಂಜು ಎಂಬವರು ಕರ್ತವ್ಯದ ವೇಳೆ ಮದ್ಯ ಸೇವನೆ ಮಾಡಿದ್ದರು ಎಂಬ ಕಾರಣಕ್ಕೆ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಅವರನ್ನು ಪಿಎಸ್​ಐ ಹರೀಶ್ ಸಸ್ಪೆಂಡ್ ಮಾಡಿಸಿದ್ದರು. ಸಸ್ಪೆಂಡ್ ರಿವೋಕ್ ಆಗದೆ ನೊಂದಿದ್ದ ಮಂಜು, ಮತ್ತಷ್ಟು ಕುಡಿತ ಚಟ ಅಂಟಿಸಿಕೊಂಡಿದ್ದರು‌. ಅವರು ಮತ್ತಷ್ಟು ಖಿನ್ನತೆಗೆ ಜಾರಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Ads on article

Advertise in articles 1

advertising articles 2

Advertise under the article