Govt Order to raise to advance Amount- ರಾಜ್ಯ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ- ತಕ್ಷಣದಿಂದಲೇ ಜಾರಿಗೆ ಬಂದ ಆದೇಶವಿದು..!
Wednesday, December 15, 2021
ರಾಜ್ಯ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ- ತಕ್ಷಣದಿಂದಲೇ ಜಾರಿಗೆ ಬಂದ ಆದೇಶವಿದು..!
ರಾಜ್ಯ ಸರಕಾರಿ ನೌಕರರಿಗೆ ನೀಡಲಾಗುವ ಬಡ್ಡಿ ರಹಿತ ನೀಡಲಾಗುವ 'ಹಬ್ಬದ ಮುಂಗಡ' ಭತ್ತೆಯ ಮೊತ್ತವನ್ನು ರಾಜ್ಯ ಸರಕಾರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ರಾಜ್ಯ ಸರಕಾರಿ ನೌಕರರು ಇದರಿಂದ ಸಂತೋಷಗೊಂಡಿದ್ದಾರೆ.
ಪ್ರಸ್ತುತ ಮುಂಗಡವಾಗಿ ರೂ. 10000/- ಪಡೆಯಲು ಅವಕಾಶ ಇತ್ತು. ಆದರೆ ಈಗ ಹೊಸ ಆದೇಶದಿಂದ ಸರಕಾರಿ ನೌಕರರು ಹತ್ತು ಸಾವಿರಕ್ಕೆ ಬದಲಾಗಿ 25000/- 'ಹಬ್ಬದ ಮುಂಗಡ' ಭತ್ತೆಯ ಮೊತ್ತವನ್ನು ಬಡ್ಡಿ ರಹಿತವಾಗಿ ಪಡೆಯಬಹುದು.
ಈ ಸೌಲಭ್ಯ ರಾಜ್ಯ ಸರಕಾರಿ ಸೇವಾ ವೃಂದದಲ್ಲಿ ಖಾಯಂ ಆಗಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಸೇರಿದಂತೆ ಎಲ್ಲ ಸರಕಾರಿ ನೌಕರರಿಗೆ ಅನ್ವಯವಾಗುತ್ತದೆ.