-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಎರಡೂವರೆ ವರ್ಷದ ಪುತ್ರಿಯ ಸಾವಿನಲ್ಲೂ ಸಾರ್ಥಕತೆ ಕಾಣಲು ಅಂಗಾಂಗ ದಾನ ಮಾಡಿದ ತಂದೆ: ಇವರ ಕರುಣಾಜನಕ ಕಥೆ ಕೇಳಿದರೆ ಎಂಥವರ ಹೃದಯವೂ ಕರಗದಿರದು

ಎರಡೂವರೆ ವರ್ಷದ ಪುತ್ರಿಯ ಸಾವಿನಲ್ಲೂ ಸಾರ್ಥಕತೆ ಕಾಣಲು ಅಂಗಾಂಗ ದಾನ ಮಾಡಿದ ತಂದೆ: ಇವರ ಕರುಣಾಜನಕ ಕಥೆ ಕೇಳಿದರೆ ಎಂಥವರ ಹೃದಯವೂ ಕರಗದಿರದು

ಚಂಡಿಗಢ: ಅಪಘಾತವೊಂದರಲ್ಲಿ ಮೃತಪಟ್ಟ ಎರಡೂವರೆ ವರ್ಷದ ಬಾಲಕಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ನಿಜವಾಗಿಯೂ ಈ ಬಾಲಕಿಯ ಸ್ಟೋರಿ ಕೇಳಿದರೆ ಖಂಡಿತಾ ಕಣ್ಣೀರು ಬರುತ್ತದೆ. ಈ ಸಾವು ನ್ಯಾಯವೇ ಎಂದು ದೇವರನ್ನು ಕೇಳಿ ಬಿಡಬಹುದು. ಅಷ್ಟೇ ಅಲ್ಲ, ಪತ್ನಿ, ಮಗ, ಮಗಳು ಸೇರಿ ಕುಟುಂಬದ 7 ಸದಸ್ಯರನ್ನು ಒಂದೇ ಸಲ ಕಳೆದುಕೊಂಡು ನೋವಿನಲ್ಲಿದ್ದರೂ ಮಗಳ ಅಂಗಾಗದಾನ ಮಾಡಿ 9 ಜನರಿಗೆ ಬದುಕು ಕೊಟ್ಟ ಬಾಲಕಿಯ ತಂದೆಗೂ ನಮಿಸದೆ ಇರಲಾರೆವು. 

ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಎರಡುವರೆ ವರ್ಷದ ಪುಟ್ಟ ಬಾಲೆಯ ಹೆಸರು ಅನಿಕಾ. ಈಕೆ ಬೆಂಗಳೂರು ಮೂಲದ ಉದ್ಯಮಿ ಅಮಿತ್ ಗುಪ್ತಾ ಹಾಗೂ ಕೀರ್ತಿ ಗುಪ್ತಾ ದಂಪತಿಯ ಪುತ್ರಿ. ಈ ದಂಪತಿಗೆ 6 ವರ್ಷದ ಪುತ್ರನೂ ಕೂಡ ಇದ್ದ. 

ಡಿ.12ರಂದು ಚಂಡಿಗಢದ ಮೊಹಾಲಿಯಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಅಮಿತ್ ಗುಪ್ತಾ ಪತ್ನಿ ಕೀರ್ತಿ ಗುಪ್ತಾ ಮತ್ತು ಪುತ್ರ  ನುವಂಶ್ ಸೇರಿ ಕುಟುಂಬದ 6 ಮಂದಿ ದುರಂತ ಅಂತ್ಯ ಕಂಡಿದ್ದರು. ಅಲ್ಲದೆ ಈ ಅಪಘಾತದಲ್ಲಿ ಗಂಭೀರಯ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ಬಾಲೆ ಅನಿಕಾಳನ್ನು ಚಂಡೀಗಢ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಪತ್ನಿ, ಪುತ್ರ ಸೇರಿ ಕುಟುಂಬ 6 ಮಂದಿಯನ್ನು ಕಳೆದುಕೊಂಡು ದುಃಖತಪ್ತರಾಗಿದ್ದ ಅಮಿತ್​ ಗುಪ್ತಾ, ಪುತ್ರಿಯನ್ನು ಉಳಿಸಿಕೊಡುವಂತೆ ವೈದ್ಯರು ಹಾಗೂ ದೇವರನ್ನು ಪರಿಪರಿಯಾಗಿ ಬೇಡಿಕೊಂಡರು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ವಿಧಿಯಾಟ ಬೇರೆಯೇ ಇತ್ತು. ಡಿ.22ರಂದು ಬಾಲಕಿ ಅನಿಕಾಳ ಮಿದುಳು ನಿಷ್ಕ್ರಯಗೊಂಡಿತ್ತು. ಇನ್ನು ಅನಿಕಾ ಬದುಕಿ ಉಳಿಯುವ ಚಾನ್ಸೇ ಇಲ್ಲ ಎಂದು ತಿಳಿಯುತ್ತಿದ್ದಂತೆ ತಂದೆ ಅಮಿತ್​ರ ಆಕ್ರಂದನ ಮುಗಿಲು ಮುಟ್ಟಿತ್ತು. 

ಈ ನೋವಿನಲ್ಲೂ ಮಹತ್ವದ ನಿರ್ಧಾರವನ್ನು ತೆಗೆದುಕೊಂಡ ಅಮಿತ್​ ಗುಪ್ತಾ, ಪುತ್ರಿಯ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದರು. ಕಿಡ್ನಿ, ಲಿವರ್​, ಕಾರ್ನಿಯಾವನ್ನು ದಾನ ಮಾಡಿದ್ದಾರೆ. ಅನಿಕಾಳ ಅಂಗಾಂಗಗಳನ್ನು 9 ಜನರಿಗೆ ಜೋಡಿಸಲಾಗಿದ್ದು, ಆ ಮೂಲಕ 9 ಮಂದಿಯ ಬದುಕಿಗೆ ಜೀವ ದೊರೆತಂತಾಗಿದೆ. 

ಪ್ರೀತಿಯ ಪತ್ನಿ, ಇಬ್ಬರು ಮಕ್ಕಳನ್ನು ಕಳೆದುಕೊಂಡ ಅಮಿತ್​ರ ಬಾಳಲ್ಲಿ ನೋವು, ಸಂಕಟದ ಮೂಟೆಯೇ ಇದೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಪುತ್ರಿಯ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದ ಅಮಿತ್​ರ ವ್ಯಕ್ತಿತ್ವ ಎಲ್ಲರಿಗೂ ಮಾದರಿ. 

"ಇಡೀ ಕುಟುಂಬವೇ ಹೋಯ್ತು. ಪುತ್ರಿಯಾದರೂ ಬದುಕಿ ಉಳಿಯುವಳೆಂಬ ಭರವಸೆಯಲ್ಲಿದ್ದೆ. ಆದರೆ ಆಕೆಯೂ ಬದುಕಿ ಉಳಿಯಲಿಲ್ಲ. ಆ ಒಂಬತ್ತು ಮಂದಿಯಲ್ಲಿರುವ ಅಂಗಾಂಗಗಳ ಮೂಲಕ ನನ್ನ ಪುತ್ರಿ ಜೀವಂತವಾಗಿದ್ದಾಳೆ ಎಂದೇ ಭಾವಿಸಿರುವೆ'' ಎನ್ನುತ್ತಲೇ ಅಮಿತ್ ಗುಪ್ತಾ ಕಣ್ಣೀರಿಟ್ಟರು. ಈ ದೃಶ್ಯ ಹಾಗೂ ಅಂಗಾಂಗ ದಾನ ಪ್ರಕ್ರಿಯೆ ಮುಗಿದ ಬಳಿಕ ಆಸ್ಪತ್ರೆಯ ವೈದ್ಯರ ತಂಡ ಅನಿಕಾಳ ಮೃತದೇಹಕ್ಕೆ ನಮಿಸಿ ಹೂಗುಚ್ಛ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ ದೃಶ್ಯ ಮನಕಲಕುವಂತಿತ್ತು.

Ads on article

Advertise in articles 1

advertising articles 2

Advertise under the article

ಸುರ