-->

ಮಂಗಳೂರು; ತುಂಬೆಯಲ್ಲಿ ನಡೆದ ಭೀಕರ ಅಪಘಾತಕ್ಕೆ ಇಬ್ಬರು ಯುವಕರು ಬಲಿ!

ಮಂಗಳೂರು; ತುಂಬೆಯಲ್ಲಿ ನಡೆದ ಭೀಕರ ಅಪಘಾತಕ್ಕೆ ಇಬ್ಬರು ಯುವಕರು ಬಲಿ!


ಮಂಗಳೂರು : ಬಂಟ್ವಾಳ ತಾಲೂಕಿನ ತುಂಬೆ ರಾಮಲ್ ಕಟ್ಟೆಯ ಬಳಿ  ಪಿಕ್ಅಪ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ  ಇಬ್ಬರು ಯುವಕರು ಮೃತಪಟ್ಟ ಘಟನೆ ನಡೆದಿದೆ.

 ಉಪ್ಪಿನಂಗಡಿ ಬಳಿಯ ಚೇತನ್ (25) ಹಾಗೂ ಆಶಿತ್ (21) ಸಾವನ್ನಪ್ಪಿದವರು. ಘಟನೆಯಲ್ಲಿ ‌ಮತ್ತಿಬ್ಬರು ಗಾಯಗೊಂಡಿದ್ದು ಅವರನ್ನು ಸಿಂಚನ್ ಮತ್ತು ಸುದೀಪ್ ಎಂದು ಗುರುತಿಸಲಾಗಿದೆ.


ಕ್ಯಾಟರಿಂಗ್ ವೊಂದರ ಆಹಾರ ಸಾಗಾಟದ ಪಿಕ್ ಅಫ್ ಕಾರ್ಯಕ್ರಮ ಮುಗಿಸಿ ಮಂಗಳೂರು ಕಡೆಯಿಂದ ಆಗಮಿಸುತ್ತಿದ್ದ ವೇಳೆ ಮರಕ್ಕೆ ಢಿಕ್ಕಿ ಹೊಡೆದಿದೆ.

 ಘಟನೆಯಲ್ಲಿ ಗಂಭೀರ ಗಾಯಗೊಂಡ ಚೇತನ್ (25) ಹಾಗೂ ಆಶಿತ್ (21) ಎಂಬವರನ್ನು ತುಂಬೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಸಾವನ್ನಪ್ಪಿದ್ದಾರೆ.


Ads on article

Advertise in articles 1

advertising articles 2

Advertise under the article