-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪತಿ - ಪತ್ನಿಯ ಮಧ್ಯೆ ವಿರಸ ಮೂಡಿಸಿದ್ದ ಪೊಲೀಸ್ ಪೇದೆಯಿಂದಲೇ ವಿವಾಹಿತೆ ಆತ್ಮಹತ್ಯೆ: ಕಾನ್ ಸ್ಟೇಬಲ್ ಪರಾರಿ

ಪತಿ - ಪತ್ನಿಯ ಮಧ್ಯೆ ವಿರಸ ಮೂಡಿಸಿದ್ದ ಪೊಲೀಸ್ ಪೇದೆಯಿಂದಲೇ ವಿವಾಹಿತೆ ಆತ್ಮಹತ್ಯೆ: ಕಾನ್ ಸ್ಟೇಬಲ್ ಪರಾರಿ

ಚಿಕ್ಕಬಳ್ಳಾಪುರ: ಪೊಲೀಸ್ ನೊಬ್ಬನ  ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತೆಯೋರ್ವಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ. ಇದೀಗ ಪೊಲೀಸ್ ಕಾನ್​ಸ್ಟೆಬಲ್​ ತಲೆಮರೆಸಿಕೊಂಡಿದ್ದಾನೆ.  

ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿರುವ ಅನಂತ ಕುಮಾರ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳೆನ್ನಲಾದ ವಿವಾಹಿತೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದಾನೆ. ಸಾವಿಗೀಡಾಗಿರುವ ವಿವಾಹಿತೆಯ ಪಾಲಕರು ಪೊಲೀಸ್ ಪೇದೆ ಅನಂತಕುಮಾರ್ ವಿರುದ್ಧ ದೂರು ನೀಡಿದ್ದು, ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪೊಲೀಸ್ ಪೇದೆಯು ಗಂಡ-ಹೆಂಡಿರ ಮಧ್ಯೆ ಜಗಳ ತಂದಿಟ್ಟು, ಅದರ ದುರ್ಲಾಭ ಪಡೆದು ಅಕ್ರಮ ಸಂಬಂಧ ಹೊಂದಿದ್ದ. ಬಳಿಕ ಇವರಿಬ್ಬರ ಮಧ್ಯೆಯೂ ಜಗಳ ನಡೆದು ಈ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಹಣದ ಆಮಿಷವೊಡ್ಡಿ ವಿವಾಹಿತೆಯನ್ನು ಗಂಡನಿಂದ ದೂರ ಮಾಡಿದ್ದ ಪೇದೆ, ಜೀವಬೆದರಿಕೆಯನ್ನೂ ಒಡ್ಡಿದ್ದ ಎಂಬ ಆರೋಪವಿದೆ. 

Ads on article

Advertise in articles 1

advertising articles 2

Advertise under the article