-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Mangaluru: ಯುವತಿಗೆ ತಮಾಷೆ ಮಾಡಿದರೆಂದು ಇತ್ತಂಡಗಳ ಮಧ್ಯೆ ಹೊಡೆದಾಟ: ಪೊಲೀಸ್ ಬಂದಾಗ ಒಂದು ತಂಡ ಪರಾರಿ

Mangaluru: ಯುವತಿಗೆ ತಮಾಷೆ ಮಾಡಿದರೆಂದು ಇತ್ತಂಡಗಳ ಮಧ್ಯೆ ಹೊಡೆದಾಟ: ಪೊಲೀಸ್ ಬಂದಾಗ ಒಂದು ತಂಡ ಪರಾರಿ

ಮಂಗಳೂರು: ಯುವತಿಗೆ ತಮಾಷೆ ಮಾಡಿದ್ದರೆಂದ ಆರೋಪದ ಹಿನ್ನೆಲೆಯಲ್ಲಿ ಎರಡು ತಂಡಗಳ ಮಧ್ಯೆ ಹೊಡೆದಟ ನಡೆದ ಘಟನೆ ನಗರದ ಕದ್ರಿ ಬಟ್ಟಗುಡ್ಡೆ ಬಳಿ ಬುಧವಾರ ಸಂಜೆ ನಡೆದಿದೆ.

ಕದ್ರಿಯ ಬಟ್ಟಗುಡ್ಡೆಯ ರೆಸ್ಟೋರೆಂಟ್‌ವೊಂದಕ್ಕೆ ಯುವತಿ,- ಯುವಕ ಜೋಡಿಯೊಂದು ಬಂದಿತ್ತು. ಈ ಸಂದರ್ಭ ಅಲ್ಲಿದ್ದ ಯುವಕರ ತಂಡವೊಂದು ಯುವತಿಗೆ ತಮಾಷೆ ಮಾಡಿದ್ದರೆಂದು ನೆಪವೊಡ್ಡಿ ಯುವತಿ ಜೊತೆಗಿದ್ದ ಯುವಕ ಅವರೊಂದಿಗೆ ತಗಾದೆ ತೆಗೆದಿದ್ದಾನೆ. ಈ ಸಂದರ್ಭ ವಾಗ್ವಾದ ಬೆಳೆದಿದೆ. 

ತಕ್ಷಣ ಯುವತಿ ಜೊತೆಗಿದ್ದಾತ ಫೋನ್ ಕರೆ ಮಾಡಿ ತನ್ನ ಗೆಳೆಯರನ್ನು ಕರೆಸಿದ್ದಾನೆ. ಪರಿಣಾಮ ಇನ್ನಷ್ಟು ಯುವಕರು ಜಮಾಯಿಸಿ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭ ಕಲ್ಲಿನಿಂದ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಯುವಕನೊಬ್ಬನ ಹಣೆಗೆ ಗಾಯವಾಗಿದೆ. 

ಈ ಬಗ್ಗೆ ಮಾಹಿತಿ ಪಡೆದ ಕದ್ರಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಪೊಲೀಸರನ್ನು ನೋಡಿದ ಯುವಕರ ಒಂದು ತಂಡ ಸ್ಥಳದಿಂದ ಪರಾರಿಯಾಗಿದೆ. ಬಳಿಕ ಪೊಲೀಸರು ಯುವತಿಯನ್ನು ವಿಚಾರಿಸಿ ಕಳುಹಿಸಿಕೊಟ್ಟಿದ್ದಾರೆ.   

Ads on article

Advertise in articles 1

advertising articles 2

Advertise under the article

ಸುರ