-->

Mangalore-ಮದುವೆ ನಿಗದಿಯಾದ ಬಳಿಕ ಈತ ಆ ಯುವತಿಗೆ ಕಳುಹಿಸಿದ ಅಶ್ಲೀಲ ಸಂದೇಶ- ನಿಶ್ಚಿತಾರ್ಥ ಮೊದಲೆ ಬಾಲ ಬಿಚ್ಚಿದ ಯುವಕ ಅಂದರ್!

Mangalore-ಮದುವೆ ನಿಗದಿಯಾದ ಬಳಿಕ ಈತ ಆ ಯುವತಿಗೆ ಕಳುಹಿಸಿದ ಅಶ್ಲೀಲ ಸಂದೇಶ- ನಿಶ್ಚಿತಾರ್ಥ ಮೊದಲೆ ಬಾಲ ಬಿಚ್ಚಿದ ಯುವಕ ಅಂದರ್!




 ಮಂಗಳೂರು : ತನ್ನ ಜತೆಗೆ ಮದುವೆ ನಿಗದಿಯಾಗಿದ್ದ ಯುವತಿಗೆ ಮದುವೆಯಾಗಬೇಕಿದ್ದ ಯುವಕ ಅಶ್ಲೀಲ , ವಿಚಿತ್ರ ಸಂದೇಶ ಕಳುಹಿಸಿ ಜೈಲುಪಾಲಾಗಿದ್ದಾನೆ.



 ನೊಂದ ಯುವತಿ ನೀಡಿದ ದೂರಿನ ಆಧಾರದಲ್ಲಿ ಆರೋಪಿ  ಕುದ್ರೋಳಿ ಆಳಕೆ ನಿವಾಸಿ ಶ್ರೀನಿವಾಸ ಭಟ್ ( 35 ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ ಭಟ್ ಗೆ  ನಗರದ ಯುವತಿಯೊಬ್ಬಳ ಜತೆ ವಿವಾಹ ಮಾತುಕತೆ ನಡೆದಿತ್ತು . 2 ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿದ ಬಳಿಕ  ಯುವಕ ಮದುವೆ ಯಾಗಲಿದ್ದಯುವತಿಯ ಮೊಬೈಲ್ ನಂಬರ್ ಪಡೆದು ವಾಟ್ಸಪ್ ಚಾಟಿಂಗ್ ಆರಂಭಿಸಿದ್ದ . 

ದಿನಕಳೆದಂತೆ ಯುವತಿ ಜತೆ ಸಲುಗೆಯಿಂದ ಮಾತನಾಡಿದ ಶ್ರೀನಿವಾಸ್ ಅಶ್ಲೀಲ , ವಿಚಿತ್ರ ಸಂದೇಶ ಗಳನ್ನು ಕಳುಹಿಸಲು ಆರಂಭಿಸಿದ. ಈ ವಿಚಾರವನ್ನು ಯುವತಿ ಮನೆಯವರ ಗಮನಕ್ಕೆ ತಂದ ಕಾರಣ ಯುವತಿ  ಕುಟುಂಬಸ್ಥರು ನಿಶ್ಚಿತಾರ್ಥವನ್ನು ಬೇರೆ ಕಾರಣ ನೀಡಿ ಮುಂದೂಡಿದ್ದರು . 

ಈ ನಡುವೆ ಯುವಕ ಸಲಿಂಗ ಕಾಮಕ್ಕೆ ಸಂಬಂಧಿಸಿದ ಅಶ್ಲೀಲ ಸಂದೇಶಗಳನ್ನು ಯುವತಿಗೆ ಕಳುಹಿಸಿದ್ದ . ಇದರಿಂದ ನೊಂದ ಯುವತಿ ಸೆ .15 ರಂದು  ಮಂಗಳೂರಿನ ಸೈಬರ್ ಠಾಣೆಗೆ ಯುವಕನ ವಿರುದ್ಧ ಮಾನಸಿಕ ಕಿರುಕುಳ ನೀಡು ತ್ತಿರುವ ಬಗ್ಗೆ ದೂರು ನೀಡಿದ್ದು ಪೊಲೀಸರು ಶ್ರೀನಿವಾಸ ಭಟ್ ನನ್ನು ಬಂಧಿಸಿದರು.

Ads on article

Advertise in articles 1

advertising articles 2

Advertise under the article