-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಜೈಲಿನಲ್ಲಿರುವ ಪ್ರಿಯತಮನನ್ನೆ ಮದುವೆಯಾಗಲು ಹಠಕ್ಕೆ ಬಿದ್ದ ಪ್ರಿಯತಮೆ- ಪೋಷಕರಿಗೆ ಪೇಚಾಟ

ಜೈಲಿನಲ್ಲಿರುವ ಪ್ರಿಯತಮನನ್ನೆ ಮದುವೆಯಾಗಲು ಹಠಕ್ಕೆ ಬಿದ್ದ ಪ್ರಿಯತಮೆ- ಪೋಷಕರಿಗೆ ಪೇಚಾಟ


ಯಾದಗಿರಿ : ಪ್ರೀತಿಯ ಬಲೆಗೆ ಬಿದ್ದಿದ್ದ ಬಾಲಕಿಯೊಬ್ಬಳು ಇದೀಗ ಪ್ರೌಢ ವಯಸ್ಕಳಾಗಿದ್ದು , ಜೈಲಿನಲ್ಲಿರುವ ಪ್ರೇಮಿಯ ಬಿಡುಗಡೆಗಾಗಿ ಎದುರು ನೋಡುತ್ತಿರುವುದು ಮಾತ್ರ ವಲ್ಲದೇ ಆತನನ್ನೇ ಮದುವೆ ಆಗಲು ಪಟ್ಟು ಹಿಡಿದು ಕುಳಿತಿರುವುದು ಪಾಲಕರ ಪೇಚಾಟಕ್ಕೆ ಕಾರಣವಾಗಿದೆ.

 ಯುವತಿಯು ತನ್ನ   ಭಾವನೆಗಳನ್ನು ಕಿತ್ತು ಹಾಕಲು ಪಾಲಕರು ಹಿಂಸೆ ನೀಡುತ್ತಿದ್ದಾರೆ ಎಂದು ಪೊಲೀಸರ ಮೊರೆ ಹೋಗಿದ್ದಾಳೆ . 

ಇದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮಾರಲಭಾವಿ ಯುವಕ  ಮತ್ತು ಮಾರನಾಳ ಗ್ರಾಮದ ಬಾಲಕಿಯ ಪ್ರೇಮ ಕತೆ . ಬಾಲಕಿಯನ್ನು ಪ್ರೀತಿಸಿದ್ದ ಯುವಕ ಜೆಸಿಬಿ ಆಪರೇಟರ್ ಆಗಿದ್ದು ಈ ಪ್ರೇಮಿಗಳು ಒಂದು ಬಾರಿ ಮನೆಬಿಟ್ಟು ಓಡಿ ಹೋಗಿದ್ದರು.ಕೊನೆಗೆ ಇವರನ್ನು ಪತ್ತೆ ಮಾಡಿ ಹುಡುಗಿ ಯನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು . ಬಾಲಕಿಯ ಮನೆಯ ಪಾಲಕರು ಯುವಕನ ಮೇಲೆ ಪೋಕ್ಸ್ ಕಾಯಿದೆ ಯಡಿ ಪ್ರಕರಣ ದಾಖಲಿಸುವ ಮೂಲಕ ಬಿಸಿ ಮುಟ್ಟಿಸಿದ್ದರು . 


ಯುವಕ 2019 ರಿಂದಲೂ ಜೈಲಿನಲ್ಲಿಯೇ ಇದ್ದು ಬಾಲಕಿಯನ್ನು ಕೂಡ ಬಾಲ ಮಂದಿರಕ್ಕೆ ಸೇರಿಸಲಾಗಿತ್ತು . ಆದರೆ ಆ ಯುವತಿ ಇದೀಗ ವಯಸ್ಕಳಾದ ಪರಿಣಾಮ ಇತ್ತೀಚೆಗೆ ಬಾಲ ಮಂದಿರದಿಂದ ಬಿಡುಗಡೆ ಮಾಡಲಾಗಿದೆ . 

ಬಾಲಮಂದಿರದಿಂದ ಬಿಡುಗಡೆಯಾಗಿರುವ ಆಕೆ ಆತನನ್ನೇ ಮದುವೆ ಆಗುವುದಾಗಿ ಪಟ್ಟು ಹಿಡಿದು ಕುಳಿತ್ತಿದ್ದಾಳೆ . ಆಕೆಯ ಕುಟುಂಬಸ್ಥರು ಪ್ರೀತಿಸಿದ ಯುವಕ ನೊಂದಿಗೆ ಮದುವೆ ಮಾಡಿಕೊಡಲು ನಿರಾಕರಿಸಿದ್ದಾರೆ .  ಇದೀಗ ಈ ಪ್ರಕರಣ ಪೊಲೀಸ್ ಠಾಣೆ  ಮೆಟ್ಟಿಲೇರಿದೆ.

Ads on article

Advertise in articles 1

advertising articles 2

Advertise under the article