-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪಟಾಕಿ‌ ತಂದ ಆಪತ್ತು: ಲೇಡೀಸ್ ಟೈಲರ್ ಅಂಗಡಿ ಬೆಂಕಿಗಾಹುತಿ, 4ಲಕ್ಷ ರೂ. ಸೊತ್ತು ಕಳೆದುಕೊಂಡು ಕಣ್ಣೀರು ಸುರಿಸುತ್ತಿರುವ ಮಾಲಕರು

ಪಟಾಕಿ‌ ತಂದ ಆಪತ್ತು: ಲೇಡೀಸ್ ಟೈಲರ್ ಅಂಗಡಿ ಬೆಂಕಿಗಾಹುತಿ, 4ಲಕ್ಷ ರೂ. ಸೊತ್ತು ಕಳೆದುಕೊಂಡು ಕಣ್ಣೀರು ಸುರಿಸುತ್ತಿರುವ ಮಾಲಕರು

ದೊಡ್ಡಬಳ್ಳಾಪುರ: ಪಟಾಕಿ ಹೊಡೆಯುತ್ತಿದ್ದಾಗ ಕಿಡಿ ಹಾರಿ ಲೇಡಿಸ್ ಟೈಲರ್ ಅಂಗಡಿಯೊಂದು ಸಂಪೂರ್ಣ ಭಸ್ಮಗೊಂಡ ಘಟನೆ ದೊಡ್ಡಬಳ್ಳಾಪುರ ಜಿಲ್ಲೆಯ ಬಾಶೆಟ್ಟಿ ಹಳ್ಳಿಯ ವಿನಾಯಕ ನಗರದಲ್ಲಿ ನಡೆದಿದೆ.

ಸ್ಥಳೀಯ  ವೇಣುಗೋಪಾಲ್ ಎನ್ನುವವರು ರಾತ್ರಿ ವೇಳೆ ಟೈಲರ್ ಅಂಗಡಿ ಮುಂದೆ ಪಟಾಕಿ ಸಿಡಿಸುತ್ತಿದ್ದರು. ಆಗ ಬೆಂಕಿ ಕಿಡಿಯೊಂದು ಅಂಗಡಿಗೆ ಹಾರಿದೆ ಎನ್ನಲಾಗಿದೆ. ಆ ಬಳಿಕ ಅಂಗಡಿ ಹೊತ್ತಿ ಉರಿಯಲಾರಂಭಿಸಿದೆ‌. ಬೆಂಕಿ ಉರಿಯುತ್ತಿದ್ದಾಗ ಪಕ್ಕದ ಮನೆಯವರಿಗೆ ತಿಳಿದು ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ‌ ಯಶಸ್ವಿಯಾಗಿದರೂ ಲೇಡೀಸ್ ಟೈಲರ್ ಅಂಗಡಿ ಒಳಗಿದ್ದ ಲೇಡಿಸ್ ವಸ್ತ್ರಗಳು  ಸೇರಿ ನಾಲ್ಕು‌ ಲಕ್ಷ ರೂ. ಸೊತ್ತು ಬೆಂಕಿಗಾಯುತಿಯಾಗಿದೆ. ಇದೀಗ ಅಂಗಡಿ ಹಾಗೂ ಲಕ್ಷಾಂತರ ರೂ. ಸೊತ್ತು ಕಳೆದುಕೊಂಡ ಟೈಲರ್ ಅಂಗಡಿ ಮಾಲಕರು ಕಣ್ಣೀರು ಹಾಕಲಾರಂಭಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ