-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಓರ್ವಳಿಗಾಗಿ ಇಬ್ಬರ ನಡುವೆ ಕಾದಾಟ: ಓರ್ವನಿಗೆ ಇರಿದು ಗಾಯ

ಓರ್ವಳಿಗಾಗಿ ಇಬ್ಬರ ನಡುವೆ ಕಾದಾಟ: ಓರ್ವನಿಗೆ ಇರಿದು ಗಾಯ

ಬೆಂಗಳೂರು: ಓರ್ವಳಿಗಾಗಿ ಇಬ್ಬರು ಯುವಕರ ನಡುವಿನ ಸಂಘರ್ಷದಿಂದ ಓರ್ವನು ಚೂರಿ ಇರಿತಗೊಂಡು ಗಾಯಾಳುವಾಗಿರುವ ಘಟನೆ ನಿನ್ನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚೂರಿಯಿಂದ ಇರಿದು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. 

ಮುತ್ತುರಾಜ್​ ಹಾಗೂ ಹೇಮಂತ್ ಬಂಧಿತ ಆರೋಪಿಗಳು. ಹರಿಕೀರ್ತನ್ ಎಂಬಾತ ಇರಿತಕ್ಕೊಳಗಾಗಿ ಗಾಯಗೊಂಡ ಯುವಕ.  

ವಿದ್ಯಾರ್ಥಿಯಾಗಿದ್ದ ಹರಿಕೀರ್ತನ್ ಯುವತಿಯೋರ್ವಳನ್ನು ಪ್ರೇಮಿಸುತ್ತಿದ್ದ. ಮುತ್ತುರಾಜ್ ಕೂಡಾ ಅದೇ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಇದರಿಂದ ಮುತ್ತುರಾಜ್ ಗೆ ಹರಿಕೀರ್ತನ್ ನೊಂದಿಗೆ ದ್ವೇಷ ಬೆಳೆದಿತ್ತು. ಮುತ್ತುರಾಜ್ ಆ ಯುವತಿಯನ್ನು ಭೇಟಿ ಆಗಬಾರದೆಂದು ಹರಿಕೀರ್ತನ್​ಗೆ ಎಚ್ಚರಿಕೆಯನ್ನೂ ನೀಡಿದ್ದ. ಆದರೆ ಅದನ್ನು ಲೆಕ್ಕಿಸದೆ ಹರಿಕೀರ್ತನ್​ ಯುವತಿಯನ್ನು ಭೇಟಿಯಾಗುತ್ತಿದ್ದ. 

 ಇದರಿಂದ ಸಿಟ್ಟಿಗೆದ್ದ ಮುತ್ತುರಾಜ್​ ತನ್ನ ಮಿತ್ರ ಹೇಮಂತ್ ಎಂಬಾತನೊಂದಿಗೆ ಸೇರಿ ಸುಂಕದಕಟ್ಟೆ ಬಳಿ ಬಸ್​ವೊಂದನ್ನು ಅಡ್ಡಗಟ್ಟಿ ಹರಿಕೀರ್ತನ್​ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ ಚೂರಿಯಿಂದ ಆತನ ಎದೆ ಮತ್ತಿತರ ಭಾಗಕ್ಕೆ ಇರಿದು ಪರಾರಿಯಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಗಾಯಾಳು ಹರಿಕೀರ್ತನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು  ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ