ಸುರತ್ಕಲ್ ನಲ್ಲಿ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಸೆಗಣಿ ಹಚ್ಚಿದ ವ್ಯಕ್ತಿ ಪತ್ತೆ- ಆತ ಯಾರು ಗೊತ್ತಾ?
ಮಂಗಳೂರು: ಸುರತ್ಕಲ್ ನ ಗೋವಿಂದದಾಸ್ ಕಾಲೇಜಿನ ಬಳಿ ಬಿಜೆಪಿ ವತಿಯಿಂದ
ಹಾಕಲಾಗಿದ್ದ ಬ್ಯಾನರ್ ನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಸೆಗಣಿ ಮತ್ತು ಕೆಸರನ್ನು ಬಳಿದ ವ್ಯಕ್ತಿಯನ್ನು ಪೊಲೀಸರು ಪತ್ತೆ
ಹಚ್ಚಿದ್ದಾರೆ.
ಅಕ್ಟೋಬರ್
2 ರಂದು ತಡರಾತ್ರಿ ಸುರತ್ಕಲ್
ಗೋವಿಂದ ದಾಸ ಕಾಲೇಜ್ ಬಳಿ ಬಿಜೆಪಿ ವತಿಯಿಂದ ಹಾಕಲಾಗಿದ್ದ ಬ್ಯಾನರ್ ನಲ್ಲಿದ್ದ ಪ್ರಧಾನ
ಮಂತ್ರಿಗಳ ಭಾವಚಿತ್ರಕ್ಕೆ ಸಗಣಿ ಹಾಗೂ ಕೆಸರನ್ನು ಬಳಿಯಲಾಗಿತ್ತು.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿತ್ತು. ಈ ಘಟನೆಯ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ.
ಸಿಸಿ
ಟಿವಿಗಳನ್ನು ಪರಿಶೀಲಿಸಿದಾಗ ಓರ್ವ
ಮಾನಸಿಕ ಅಸ್ವಸ್ಥ ವ್ಯಕ್ತಿ ಈ ಕೃತ್ಯ ಎಸಗಿರುವುದು ಕಂಡು ಬಂದಿತ್ತು. ಪೊಲೀಸರು ಈ ವ್ಯಕ್ತಿಯನ್ನು ಇಂದು ಪತ್ತೆ ಹಚ್ಚಿದಾಗ ಆತನು ಸಂಪೂರ್ಣ ವಾಗಿ ಮಾನಸಿಕ ಅಸ್ವಸ್ಥನಾಗಿರುವ ಬಗ್ಗೆ ತಿಳಿದುಬಂದಿದೆ.
ಈ ಬಗ್ಗೆ ಮಂಗಳೂರು
ಉತ್ತರ ಎಪಿಪಿ ಹಾಗೂ
ನ್ಯಾಯಾಧೀಶರನ್ನು
ಸಂಪರ್ಕಿಸಿ ಪೊಲೀಸರು
ಮಾಹಿತಿ ನೀಡಿದ್ದು
ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಅವಶ್ಯಕತೆ ಇಲ್ಲವೆಂದು ತಿಳಿಸಿರುತ್ತಾರೆ.
ಆತನ ಪ್ರಸ್ತುತ
ಸ್ಥಿತಿಯ ವಿಡಿಯೋ ಈ ರೀತಿ ಇದೆ.