-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪುತ್ತೂರು : ಇದೆಂತಹ ಕ್ರೌರ್ಯ?-ಸಲಿಂಗ ಕಾಮಿಯಿಂದ ಎಂಡೋ ಪೀಡಿತ ಬಾಲಕನ ಅತ್ಯಾಚಾರ!

ಪುತ್ತೂರು : ಇದೆಂತಹ ಕ್ರೌರ್ಯ?-ಸಲಿಂಗ ಕಾಮಿಯಿಂದ ಎಂಡೋ ಪೀಡಿತ ಬಾಲಕನ ಅತ್ಯಾಚಾರ!

 


 

ಮಂಗಳೂರು: ಪುತ್ತೂರಿನಲ್ಲಿ ಸಲಿಂಗಕಾಮಿಯೋರ್ವ ಎಂಡೋಪೀಡಿತ ಬಾಲಕನ ಅತ್ಯಾಚಾರ ಮಾಡಿದ ಘಟನೆ ನಡೆದಿದೆ.

 

20 ವರ್ಷದ ಎಂಡೋ ಸಲ್ಪಾನ್ ಪೀಡಿತ ಬಾಲಕ  ವಾಕಿಂಗ್ ಗೆಂದು ಮನೆಯ ಹೊರಗೆ ಹೋದ ಸಂದರ್ಭದಲ್ಲಿ ಈ ಕ್ರೌರ್ಯ ನಡೆದಿದೆ. ಬಾಲಕನು ಮುರ  ರೈಲ್ವೆ ಕ್ರಾಸ್ ತಲುಪಿದಾಗ ಈತನ ಬಳಿ ಬಂದ ಮುಹಮ್ಮದ್ ಹನೀಫ್ ಎಂಬಾತ ಕಬ್ಬು ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾನೆ.

 

ಸ್ವಲ್ಪ ದೂರ ಹೋಗಿ ಪೊದೆಗಳಿಗಿರುವ ಜಾಗಕ್ಕೆ ಕರೆದುಕೊಂಡು ಹೋಗಿ ನೆಲದಲ್ಲಿ ಮಲಗಿ ಪ್ಯಾಂಟ್ ಜಾರಿಸಲು ತಿಳಿಸಿದಾಗ ಬಾಲಕ ನಿರಾಕರಿಸಿದ್ದಾನೆ. ಆಗ ಬಲವಂತದಿಂದ ಮುಹಮ್ಮದ್ ಹನೀಫ್ ಬಾಲಕನನ್ನು ಅತ್ಯಾಚಾರ ಮಾಡಿದ್ದಾನೆ.

 

ಅತ್ಯಾಚಾರ ಮಾಡಿದ ಬಳಿಕ ಇದನ್ನು ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಮನೆಯಲ್ಲಿ ಬಾಲಕನ ವಸ್ತ್ರದಲ್ಲಿ  ಮಣ್ಣಾಗಿರುವುದನ್ನು ಗಮನಿಸಿದ ಮನೆಯವರು ಆತನಲ್ಲಿ ವಿಚಾರಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ads on article

Advertise in articles 1

advertising articles 2

Advertise under the article