-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ತಾರಾ ದಂಪತಿ ಸಮಂತಾ-ನಾಗಚೈತನ್ಯ ಬೇರೆಯಾಗಲು ಈ ಸ್ಟಾರ್ ನಟನೇ ಕಾರಣ: ಬೊಟ್ಟು ಮಾಡಿದ ನಟಿ ಕಂಗನಾ

ತಾರಾ ದಂಪತಿ ಸಮಂತಾ-ನಾಗಚೈತನ್ಯ ಬೇರೆಯಾಗಲು ಈ ಸ್ಟಾರ್ ನಟನೇ ಕಾರಣ: ಬೊಟ್ಟು ಮಾಡಿದ ನಟಿ ಕಂಗನಾ

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಈಗ ತಾರಾ ದಂಪತಿ ಸಮಂತಾ-ನಾಗಚೈತನ್ಯ ದಾಂಪತ್ಯ ವಿಚ್ಛೇದನವೇ ಹೆಚ್ಚು ಸುದ್ದಿಯಲ್ಲಿದೆ. ಬಹಳಷ್ಟು ಕಾಲದಿಂದ ಈ ವಿಚಾರ ಭಾರೀ ಚರ್ಚೆಯಲ್ಲಿದ್ದರೂ ನಾಗ - ಸಮಂತಾ ಮಾತ್ರ ಈ ವಿಚಾರವಾಗಿ ಚಕಾರ ಎತ್ತಿರಲಿಲ್ಲ. ಆದರೆ ನಿನ್ನೆ ಅಧಿಕೃತವಾಗಿ ವಿಚ್ಛೇದನ ಕೊಡುವುದಾಗಿ​ ಘೋಷಣೆ ಮಾಡಿಕೊಂಡಿದ್ದಾರೆ‌.

ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿರುವಂತೆಯೇ ಬಾಲಿವುಡ್​ ನಟಿ ಕಂಗನಾ ರಣಾವತ್ ಅವರು ನಾಗ - ಸಮಂತಾ ಬೇರೆಯಾಗಲು ಬಾಲಿವುಡ್ ನ ಸೂಪರ್ ಸ್ಟಾರ್ ಒಬ್ಬರು ಕಾರಣ ಎಂದು ಬೊಟ್ಟು ಮಾಡಿ ಗಂಭೀರ ಆರೋಪ ಮಾಡಿದ್ದಾರೆ. 


ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ‌ ಕಂಗಣಾ ಅವರು, "ದಕ್ಷಿಣ ಭಾರತ ಸಿನಿರಂಗದ ಸೂಪರ್​ ಸ್ಟಾರ್​ ದಿಢೀರನೇ ತಮ್ಮ ಪತ್ನಿಗೆ ವಿಚ್ಛೇದನ ನೀಡುವ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಚುಕ್ಕಿಯಿಟ್ಟಿದ್ದಾರೆ. ಈ ನಟ ಇತ್ತೀಚೆಗಷ್ಟೇ 10 ವರ್ಷಗಳ ದಾಂಪತ್ಯ ಜೀವನ ಮುರಿದುಕೊಂಡ ಡಿವೋರ್ಸ್​ ತಜ್ಞ ಎಂದೇ ಖ್ಯಾತರಾಗಿರುವ ಬಾಲಿವುಡ್​ ಸೂಪರ್​ಸ್ಟಾರ್​ ಸಂಪರ್ಕಕ್ಕೆ ಬಂದಿದ್ದರು. ಈ ಸೂಪರ್​ಸ್ಟಾರ್​ ಅನೇಕ ಮಹಿಳೆಯರ ಮತ್ತು ಮಕ್ಕಳ ಜೀವನವನ್ನು ಹಾಳುಗೆಡವಿದ್ದಾರೆ. ಈಗ ಆ ಡಿವೋರ್ಸ್ ತಜ್ಞ ಬಾಲಿವುಡ್ ನಟನ ಮಾರ್ಗದರ್ಶಕ ಬೆಳಕು ದಕ್ಷಿಣ ಭಾರತದ ನಟನ ಮೇಲೆ ಬಿದ್ದಿದೆ. ನಾನು‌ ಈ ರೀತಿ ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ ಎಂದು ನಾನು ಅಂದುಕೊಳ್ಳುತ್ತೇನೆ" ಕಂಗನಾ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಬಾಲಿವುಡ್​ ನಟ ಆಮೀರ್​ ಖಾನ್​ ತಮ್ಮ ಪತ್ನಿ ಕಿರಣ್​ ರಾವ್​ ಗೆ ವಿಚ್ಛೇದನ ನೀಡುವ​ ಮೂಲಕ 15 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ.  ನಾಗಚೈತನ್ಯ ಅವರು ಆಮೀರ್​ ಖಾನ್​ ಅಭಿನಯದ 'ಲಾಲ್​ ಸಿಂಗ್​ ಚಡ್ಡಾ' ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಆಮೀರ್​ ಖಾನ್ ಹಾಗೂ ನಾಗಚೈತನ್ಯ ತುಂಬಾ ಆಪ್ತರಾಗಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ ರಿಲೀಸ್ ಆಗಿರುವ ನಾಗಚೈತನ್ಯ ಅವರ “ಲವ್​ ಸ್ಟೋರಿ” ಸಿನಿಮಾ ಪ್ರೀ ರಿಲೀಸ್​ ಈವೆಂಟ್​ನಲ್ಲೂ ಆಮೀರ್​ ಖಾನ್​ ಪಾಲ್ಗೊಂಡಿದ್ದರು. ಅಲ್ಲದೆ, ನಾಗರ್ಜುನ ಮನೆಯಲ್ಲಿ ಆಮೀರ್​ ಅವರಿಗೆ ಸಣ್ಣ ಪಾರ್ಟಿಯನ್ನು ಸಹ ಆಯೋಜಿಸಲಾಗಿತ್ತು. ಆದ್ದರಿಂದ ಈ ಎಲ್ಲಾ ಬರಹವನ್ನು ಆಮೀರ್ ಖಾನ್  ಅವರನ್ನು ಉದ್ದೇಶಿಸಿಯೇ ಕಂಗನಾ ಪೋಸ್ಟ್​ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.


ಅ.2 ರಂದು ತಾರಾ ದಂಪತಿ  ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶವನ್ನು ಬರೆದುಕೊಂಡಿದ್ದಾರೆ. “ಸಾಕಷ್ಟು ಸಮಾಲೋಚನೆ ನಡೆಸಿದ ಬಳಿಕವು ನಾವಿಬ್ಬರೂ ಪತಿ-ಪತ್ನಿ ಸಂಬಂಧ ತೊರೆದು ಬೇರೆಯಾಗುವ ನಿರ್ಧಾರ ಕೈಗೊಂಡಿದ್ದೇವೆ. ಒಂದು ದಶಕದ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ನಮ್ಮಿಬ್ಬರ ಮಧ್ಯೆ ಮುಂದೆಯೂ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಬರೆದುಕೊಂಡಿದ್ದಾರೆ. 

ಜೊತೆಗೆ, ನಮ್ಮ‌ ಈ ಸಂಕ್ರಮಣ ಕಾಲಘಟ್ಟದಲ್ಲಿ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ನಾವು ಸಮಸ್ಥಿತಿಗೆ ಬರಲು ಅಗತ್ಯವಾದ ಏಕಾಂತತೆ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ