-->

ಬಿಗ್ ರಿಲೀಫ್: ಕೊನೆಗೂ ಸಿಕ್ತು ಶಾರುಖ್ 'ಪುತ್ರ'ನಿಗೆ ಜಾಮೀನು!‌

ಬಿಗ್ ರಿಲೀಫ್: ಕೊನೆಗೂ ಸಿಕ್ತು ಶಾರುಖ್ 'ಪುತ್ರ'ನಿಗೆ ಜಾಮೀನು!‌

ಮುಂಬೈ: ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಆರ್ಯನ್​ ಆರೋಪದಲ್ಲಿ ಎನ್​ಸಿಬಿ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್​ ಬಾದ್ ಷಾ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​​ಗೆ ಮೂರು ವಾರಗಳ ಬಳಿಕ ಬಿಗ್ ರಿಲೀಫ್ ದೊರಕುವ ಮೂಲಕ ಕೊನೆಗೂ ನ್ಯಾಯಾಲಯ ಜಾಮೀನು ನೀಡಿದೆ.

ಇಂದು ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್​ ಆರ್ಯನ್ ಖಾನ್ ಗೆ ಜಾಮೀನು ನೀಡಿದೆ.​ ಕಳೆದ ಮೂರು ವಾರಗಳಿಂದ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದು ಆದರೆ, ಮುಂಬೈನ ವಿಶೇಷ ಎನ್​ಡಿಪಿಎಸ್​​ ನ್ಯಾಯಾಲಯ​ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬಳಿಕ ಆರ್ಯನ್ ಖಾನ್​ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಕೊನೆಗೂ ಆರ್ಯನ್​ ಖಾನ್ ಗೆ ಇಂದು ಜಾಮೀನು ದೊರೆತಿದೆ.

ವಾಣಿಜ್ಯ ನಗರಿ ಮುಂಬೈನ ಐಷಾರಾಮಿ ಕಾರ್ಡಿಲಿಯಾ ಕ್ರೂಸ್​ ಎಂಪ್ರೆಸ್​ ಹಡಗಿನಲ್ಲಿ ನಡೆಯುತ್ತಿದ್ದ ರೇವ್​ ಪಾರ್ಟಿಯ ಮೇಲೆ ಅಕ್ಟೋಬರ್​ 2ರಂದು ರಾತ್ರಿ ನಾರ್ಕೋಟಿಕ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ತಂಡ ದಾಳಿ ನಡೆಸಿತ್ತು. ಈ ಸಂದರ್ಭ ಕೊಕೇನ್​, ಹಶೀಶ್​ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಮಾದಕವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಆರ್ಯನ್​ ಖಾನ್​ ಸೇರಿದಂತೆ ಒಟ್ಟು 8 ಮಂದಿಯನ್ನು ಎನ್​ಸಿಬಿ ವಶಕ್ಕೆ ಪಡೆದು, ವಿಚಾರಣೆಯ ಬಳಿಕ ಬಂಧಿಸಿತ್ತು. 23 ವರ್ಷ ವಯಸ್ಸಿನ ಆರ್ಯನ್​ ಖಾನ್​ ಅ. 3ರಿಂದ ನ್ಯಾಯಾಂಗ ಬಂಧನಕ್ಕೊಳಗಾಗಿ, ಅ. 8ರಿಂದ ಮುಂಬೈನ ಅರ್ಥರ್​ ರೋಡ್ ನ ಜೈಲಿನಲ್ಲಿದ್ದರು. ಅಂದಿನಿಂದ ಎರಡು ಬಾರಿ ಆರ್ಯನ್​ ಖಾನ್ ಗೆ ಜಾಮೀನು ನೀಡಲು ನ್ಯಾಯಾಲಯ ಒಪ್ಪಿರಲಿಲ್ಲ. ಕೊನೆಗೂ 25 ದಿನಗಳ ಬಳಿಕ ಆರ್ಯನ್​ಗೆ ಇಂದು ಜಾಮೀನು ದೊರೆತಿದೆ.

ಪ್ರತೀ ವಿಚಾರಣೆಯ ವೇಳೆ ಆರ್ಯನ್​ ಖಾನ್​ ಪರ ವಾದಿಸಿದ ನ್ಯಾಯವಾದಿ ದಾಳಿಯ ವೇಳೆ ಆತನ​ ಬಳಿ ಯಾವುದೇ ಡ್ರಗ್ಸ್​ ಪತ್ತೆಯಾಗಿಲ್ಲ ಎಂದು ಪದೇಪದೆ ವಾದಿಸುತ್ತಿದ್ದರು. ಆದರೆ, ರೇವ್​ ಪಾರ್ಟಿಯಲ್ಲಿ ಆರ್ಯನ್​ ಪಾತ್ರವಿದೆ. ಆತ ಅಕ್ರಮ ಡ್ರಗ್ಸ್​ ವ್ಯವಹಾರದಲ್ಲಿ ಭಾಗಿಯಾಗಿದ್ದ ಎಂಬುದನ್ನು ಆತನ ವಾಟ್ಸ್​ಆ್ಯಪ್​ ಚಾಟ್ ಬಹಿರಂಗಪಡಿಸಿದೆ ಎಂದು ಎನ್​ಸಿಬಿ ಪರ ವಕೀಲರು ವಾದಿಸುತ್ತಿದ್ದರು. 

Ads on article

Advertise in articles 1

advertising articles 2

Advertise under the article