-->

ಮಾರಕಾಸ್ತ್ರದಿಂದ ಕೊಚ್ಚಿ 23 ವರ್ಷದ ಯುವಕನ ಹತ್ಯೆ🛑

ಮಾರಕಾಸ್ತ್ರದಿಂದ ಕೊಚ್ಚಿ 23 ವರ್ಷದ ಯುವಕನ ಹತ್ಯೆ🛑

ಶಿವಮೊಗ್ಗ: ಯುವಕನೋರ್ವನನ್ನು  ದುಷ್ಕರ್ಮಿಗಳ ತಂಡವೊಂದು‌ ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಬೈಪಾಸ್ ಗೆ ಹೊಂದಿಕೊಂಡಿರುವ ವಾದಿ- ಎ- ಹುದಾ ಬಡಾವಣೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ವಾದಿ- ಎ- ಹುದಾ ಬಡಾವಣೆಯ ನಿವಾಸಿ ಝೈನುದ್ದೀನ್(23) ಕೊಲೆಯಾದ ದುರ್ದೈವಿ ಯುವಕ.   ಝೈನುದ್ದೀನ್ ರಾತ್ರಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ತಂಡವೊಂದು ಏಕಾಏಕಿ ದಾಳಿ ನಡೆಸಿದೆ. ಬಳಿಕ ಆತನನ್ನು ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಹಳೆವೈಷಮ್ಯವೇ ಈ ಕೊಲೆಗೆ ಕಾರಣ ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಝೈನುದ್ದೀನ್ ಮೇಲೆ ದೊಡ್ಡ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article