-->

ಅತ್ತೆ ಮನೆಗೆ ಬಂದ ಅಳಿಯ ಮೂರು ಕೊಲೆ ಮಾಡಿ ಪರಾರಿಯಾದ!

ಅತ್ತೆ ಮನೆಗೆ ಬಂದ ಅಳಿಯ ಮೂರು ಕೊಲೆ ಮಾಡಿ ಪರಾರಿಯಾದ!

ರಾಯಚೂರು: ಅತ್ತೆ ಮನೆಗೆ ಪಾಪಿ‌ ಅಳಿಯನೋರ್ವನು ಪತ್ನಿ, ಅತ್ತೆ ಹಾಗೂ ನಾದಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಮಂಗಳವಾರ ರಾತ್ರಿ ರಾಯಚೂರು ಹೊರವಲಯದ ಯರಮರಸ್ ಕ್ಯಾಂಪ್​ ಎಂಬಲ್ಲಿ ಈ ಭಯಾನಕ ಘಟನೆ ನಡೆದಿದೆ. ವೈಷ್ಣವಿ(25), ಆರತಿ(16), ಸಂತೋಪಿ(45) ಮೃತ ದುರ್ದೈವಿಗಳು.

ಸಾಯಿ ಎಂಬಾತನಿಗೆ 6 ತಿಂಗಳ ಹಿಂದಷ್ಟೇ ವೈಷ್ಣವಿ ಎಂಬ ಯುವತಿಯೊಂದಿಗೆ ಮದುವೆಯಾಗಿತ್ತು. ಮದುವೆಯ ಬಳಿಕ ಸಾಯಿ ಹಾಗೂ ವೈಷ್ಣವಿ ನಡುವೆ ದಿನವೂ ಜಗಳವಾಗುತ್ತಿತ್ತು. ಇದರಿಂದ ವೈಷ್ಣವಿ ತವರು ಮನೆ ಸೇರಿದ್ದಳು. ಇದೇ ವಿಚಾರ ಮಾತನಾಡಲು ಅತ್ತೆ ಮನೆಗೆ ಬಂದಿದ್ದ ಸಾಯಿ ಜಗಳ ಕಾದಿದ್ದಾನೆ. ಈ ಸಂದರ್ಭ ಕೋಪಗೊಂಡ ಸಾಯಿ ಪತ್ನಿ, ಅತ್ತೆ, ನಾದಿನಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದಾನೆ. 

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಢಾಯಿಸಿದ್ದ ರಾಯಚೂರು ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. 

Ads on article

Advertise in articles 1

advertising articles 2

Advertise under the article