-->

ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ!

ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ!

ರಾಮನಗರ: ವಿವಾಹಿತ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಕಬ್ಬಾಳುವಿನಲ್ಲಿ ನಡೆದಿದೆ.



ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚಿಟಿ ತಾಲೂಕು ಉರುಗ್ಯಂ ಗ್ರಾಮದ ಚಂದನ (20) ಎಂಬ ವಿವಾಹಿತ ಮಹಿಳೆ ಮತ್ತು  ಉರುಗ್ಯಂ  ಗ್ರಾಮದ ಸತೀಶ್ ಕುಮಾರ್ (24) ಆತ್ಮಹತ್ಯೆಗೈದವರು.

ಇವರು ರಾಮನಗರ ಜಿಲ್ಲೆಯ ಪ್ರಮುಖ‌ ಧಾರ್ಮಿಕ‌ ಕ್ಷೇತ್ರವಾದ ಕಬ್ಬಾಳು ಬೆಟ್ಟಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ನಾಲ್ಕು  ದಿನದ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.


ವಿವಾಹಿತೆ ಚಂದನಳ ಹೆತ್ತವರು  ದೊಡ್ಡಮರಳ್ಳಿ ಗ್ರಾಮದ ಗಣೇಶ್​ ಎಂಬಾತನ ಜೊತೆ ಕಳೆದ ವರ್ಷ ವಿವಾಹ ಮಾಡಿಕೊಟ್ಟಿದ್ದರು. ಗಣೇಶ್ ಕನಕಪುರದ  ಹೋಟೆಲ್​ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದು, ಕುಟುಂಬದೊಡನೆ ವಾಸವಿದ್ದನು.

ಚಂದನ ಮತ್ತು ಸತೀಶ್ ಹಲವು ವರ್ಷಗಳಿಂದ  ಪ್ರೀತಿಸುತ್ತಿದ್ದು ಬೇರೊಬ್ಬನ ಜೊತೆ ಮದುವೆ ಮಾಡಿಕೊಟ್ಟಿದ್ದರಿಂದ ಆಕೆ ನೊಂದಿದ್ದಳು . ಸೆ. 22 ರಂದು ಚಂದನ ಮನೆಯಿಂದ ನಾಪತ್ತೆಯಾದ ಆಕೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇದೀಗ ತನ್ನ ಪ್ರಿಯಕರನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 


ಬೆಟ್ಟದಲ್ಲಿ ಓಡಾಡುವ  ಗ್ರಾಮಸ್ಥರಿಗೆ ಕೊಳೆತ ವಾಸನೆಯಿಂದ ಶವಗಳ ಸುಳಿವು ದೊರೆತಿದ್ದು ಅವರು  ಸಾತನೂರು ಪೊಲೀಸರಿಗೆ ತಿಳಿಸಿದ್ದಾರೆ. ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article