2 children adopted educationally by Ravindra Shetty | ಅಲೆಮಾರಿ ಮಕ್ಕಳ ದತ್ತು: ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು




ಇತ್ತೀಚೆಗೆ ದೃಶ್ಯ ಮಾಧ್ಯಮವೊಂದು ತುಮಕೂರು ನಡವಳಲು ತೊಂಡಗೆರೆಯ ಗುಡಿಸಲು ನಿವಾಸಿ ನರಸಿಂಹ ಮೂರ್ತಿ ಮತ್ತು ಕುಟುಬದ ನರಕಯಾತನೆ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು.


ಈ ಮನ ಮಿಡಿಯುವ ಸುದ್ದಿಗೆ ಸ್ಪಂದಿಸಿದ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಈ ಕುಟುಂಬದ ಇಬ್ಬರು ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡಿದ್ದಾರೆ.


ರಾಜ್ಯದ ಪ್ರತಿಷ್ಠಿತ ಸುದ್ದಿ ವಾಹಿನಿಗಳಲ್ಲಿ ಒಂದಾದ ಸುವರ್ಣ ನ್ಯೂಸ್ ನಲ್ಲಿ ತುಮಕೂರು ನಡವಳಲು ತೊಂಡಗೆರೆ ಯ ಗುಡಿಸಲು ವಾಸ ಎನ್ನಲು ಸಾಧ್ಯವಿಲ್ಲದ ನಿವಾಸ ರಹಿತ ನರಸಿಂಹ ಮೂರ್ತಿ ಯವರ ಪತ್ನಿ ಮಕ್ಕಳ ನರಕಯಾತನೆಯ ಬದುಕಿನ ವಿಸ್ತ್ರತ ವರದಿಯನ್ನು ಪ್ರಸಾರ ಮಾಡಿತ್ತು.


ಈ ಸುದ್ದಿಯನ್ನು ಗಮನಿಸಿದ ರವೀಂದ್ರ ಶೆಟ್ಟಿ ಅವರು, ಸರಕಾರ ಈಗಾಗಲೇ ನಿವೇಶನ ನೀಡುವಲ್ಲಿ ಮುಂದೆ ಬಂದಿದೆ, ಈ ಬಗ್ಗೆ ನಾನು ಸಾಕಷ್ಟು ಪ್ರಯತ್ನ ಪಡುತ್ತೇನೆ. ಜೊತೆಗೆ ಈ ಮನಕರಗುವ ಸುದ್ದಿಯನ್ನು ಗಮನಿಸಿ ಈ ಬಡ ಕುಟುಂಬದ ಇಬ್ಬರು ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸುತ್ತೇನೆ ಎಂದು ಹೇಳಿದ್ದರು.







ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆ ಬಡ ಕುಟುಂಬದವರು ವಾಸವಿರುವ ಜಾಗಕ್ಕೆ ಹೋಗಿ ಸಹಾಯ ಹಸ್ತ ನೀಡಿದರು. ಅಲ್ಲದೆ, ನಿಮ್ಮ ಜೊತೆ ನಾನಿದ್ದೇನೆ ಎಂದು ಭರವಸೆ ನೀಡಿದ್ದಲ್ಲದೆ, ಕುಟುಂಬದ ಇಬ್ಬರು ಮಕ್ಕಳ ಶೈಕ್ಷಣಿಕ ಜವಾಬ್ದಾರಿಯನ್ನೂ ರವೀಂದ್ರ ಶೆಟ್ಟಿಯವರು ತೆಗೆದುಕೊಂಡಿದ್ಧಾರೆ.

BREAKING NEWS
Loading latest news...
Join our WhatsApp Channel Powered By : Online Pudu