-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರು: ಲವ್ ಜಿಹಾದ್ ವಿರುದ್ಧ ಹಿಂದೂ ಯುವತಿಯರು ತಲವಾರು ಹಿಡಿಯಬೇಕು - ಸಾಧ್ವಿ ಸರಸ್ವತಿ ದೇವಿ

ಮಂಗಳೂರು: ಲವ್ ಜಿಹಾದ್ ವಿರುದ್ಧ ಹಿಂದೂ ಯುವತಿಯರು ತಲವಾರು ಹಿಡಿಯಬೇಕು - ಸಾಧ್ವಿ ಸರಸ್ವತಿ ದೇವಿ

ಮಂಗಳೂರು: ಭಾರತವನ್ನು ಉಳಿಸಲು ಹಿಂದೂಗಳು ಒಂದಾಗುವ ಅವಶ್ಯಕತೆ ಇದೆ‌.‌ ಸನಾತನ ಧರ್ಮದ ರಕ್ಷಣೆಗೆ ಶಸ್ತ್ರ ಬಳಸುವುದು ಅವಶ್ಯಕ. ಆದ್ದರಿಂದ ಲವ್ ಜಿಹಾದ್ ವಿರುದ್ಧ ಯುವತಿಯರು ತಲವಾರುಗಳನ್ನು ಧಾರಣೆ ಮಾಡಬೇಕೆಂದು ಮಧ್ಯಪ್ರದೇಶದ ಸಾಧ್ವಿ ಸರಸ್ವತಿ ದೇವಿ ಹೇಳಿದರು.

ಬಂಟ್ವಾಳದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಬಜರಂಗಳ ದಿಂದ ಶೌರ್ಯಜಾಗರಣ ರಥ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂಗಳು ಜಾತಿವ್ಯವಸ್ಥೆಯಿಂದ ಬೇರ್ಪಡಬಾರದು. ನಮ್ಮೊಡನೆ ಇದ್ದು ಈಗ ಕೆಲವರು ಒಗ್ಗಟ್ಟಾಗಿ ಭೀತಿ ಹುಟ್ಟಿಸುತ್ತಿದ್ದಾರೆ. ಇದಕ್ಕೆ ಶಿವಮೊಗ್ಗದ ಗಲಭೆಯೇ ಸಾಕ್ಷಿ ಎಂದರು.

ಈದ್ ಮಿಲಾದ್ ವೇಳೆ ಟಿಪ್ಪುಸುಲ್ತಾನ್, ಔರಂಗಜೇಬನ ದೊಡ್ಡ ದೊಡ್ಡ ಕಟೌಟ್ ಹಾಕಲಾಗಿತ್ತು. ಇದು ರಾಮ, ಕೃಷ್ಣರ ಭೂಮಿ, ಹನುಮಾನ್ ಜನಿಸಿದ ಭೂಮಿ, ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿ ಮಹಾರಾಜರ ಭೂಮಿ. ಟಿಪ್ಪುಸುಲ್ತಾನ್, ಔರಂಗಜೇಬನ ಭೂಮಿ‌ಯಲ್ಲ. ಇಂತಹ ದುಷ್ಟರಿಗೆ ಉಗ್ರವಾಗಿ ಉತ್ತರ ನೀಡಬೇಕಾಗಿದೆ‌.‌ ಹಿಂದೂಗಳ ಅಸ್ತಿತ್ವವನ್ನು ಕೆಣಕಿದರೆ ಇಡೀ ಸಮುದಾಯವನ್ನು ನಾಶ ಮಾಡುವ ತಾಕತ್ತು ಹಿಂದೂಗಳಿಗಿದೆ ನೆನಪಿರಲಿ.

ಕರ್ನಾಟಕದಲ್ಲಿ ಇರಬೇಕಾದರೆ ರಹೀಮ್, ರಸ್ತಾನ್ ಗಳಾಗಿ ಇರಬೇಕು. ಟಿಪ್ಪುಸುಲ್ತಾನ್, ಔರಂಗಜೇಬ್ ಆಗಲು ಹೊರಟರೆ ಅಂತವರ ಅಸ್ತಿತ್ವವೇ ನಾಶವಾಗುತ್ತದೆ. ಟಿಪ್ಪುಸುಲ್ತಾನ್, ಔರಂಗಜೇಬ್, ಬಾಬರ್ ಲೂಟಿ ಕೋರರು, ಪಾಪಿಗಳಾಗಿದ್ದರು. ಕರ್ನಾಟಕದ ಹಿಂದೂಗಳು ಜಾಗೃತರಾಗಬೇಕು ಎಂದು ಸಾಧ್ವಿ ಸರಸ್ವತಿ ದೇವಿ ಹೇಳಿದರು.



Ads on article

Advertise in articles 1

advertising articles 2

Advertise under the article

ಸುರ