-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮೂತ್ರಪಿಂಡ ವೈಫಲ್ಯದ ಬೆನ್ನಲ್ಲೇ ಯುವಕ ಹೃದಯಾಘಾತದಿಂದ ಸಾವು - ಹೆಲ್ತ್ ಬುಲೆಟಿನ್ ನಲ್ಲಿ ಭಯಾನಕ ಸತ್ಯ ಬಯಲು

ಮೂತ್ರಪಿಂಡ ವೈಫಲ್ಯದ ಬೆನ್ನಲ್ಲೇ ಯುವಕ ಹೃದಯಾಘಾತದಿಂದ ಸಾವು - ಹೆಲ್ತ್ ಬುಲೆಟಿನ್ ನಲ್ಲಿ ಭಯಾನಕ ಸತ್ಯ ಬಯಲು


ತಿರುವನಂತಪುರಂ: ಕೇರಳದಲ್ಲಿ ಮಾಂಸಹಾರಿ ಹೋಟೆಲ್​ಗಳು ಇದೀಗ ಜೀವಕಂಟಕವಾಗುತ್ತಿದೆಯೇ ಎಂದು ಅನ್ನಿಸಲು ತೊಡಗಿದೆ. ಚಿಕನ್​ ಶೋರ್ಮಾ ತಿಂದು ಹದಿನಾರರ ಬಾಲಕಿ ಮೃತಪಟ್ಟ ಬಳಿಕವಂತೂ ಕೇರಳದ ಆಹಾರ ಸುರಕ್ಷತಾ ಇಲಾಖೆಯು ಹೋಟೆಲ್​ಗಳ ಮೇಲೆ ದಾಳಿ ಮಾಡಿ, ಈಗಾಗಲೇ ಅನೇಕ ಹೋಟೆಲ್​ಗಳಿಗೆ ಬೀಗ ಜಡಿದಿದೆ. ಈ ನಡುವೆಯೇ ಮತ್ತೊಂದು ಆತಂಕಕಾರಿ ದುರಂತವೊಂದು ಸಂಭವಿದೆ. ಶೋರ್ಮಾ ತಿಂದು ಫುಡ್​ ಪಾಯಿಸನ್​ ಆಗಿದ್ದ 24ರ ಯುವಕನೊಬ್ಬನು ದುರಂತವಾಗಿ ಮೃತಪಟ್ಟಿದ್ದಾನೆ.

ಕೇರಳದ ಕೊಟ್ಟಾಯಂ ನಿವಾಸಿ ರಾಹುಲ್​ ಡಿ ನಾಯರ್​ ಮೃತಪಟ್ಟ ಯುವಕ. ಅ.25ರಂದು ಮಧ್ಯಾಹ್ನ 2.55ಕ್ಕೆ ಈತ ಮೃತಪಟ್ಟಿದ್ದಾನೆ. ಈತ ಸೋಂಕಿನಿಂದ ಅಂಗಾಂಗ ವೈಫಲ್ಯಗೊಂಡು ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ರಾಹುಲ್​ಗೆ ತಜ್ಞ ವೈದ್ಯರಿಂದ ಚಿಕಿತ್ಸೆ ದೊರೆಯುತ್ತಿತ್ತು. ಆದರೆ ಹೆಲ್ತ್​ ಬುಲೆಟಿನ್​ ಪ್ರಕಾರ ಈತನಿಗೆ ಫುಡ್​ ಪಾಯಿಸನ್​ನಿಂದ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಆದರೆ, ತಜ್ಞರ ಪರೀಕ್ಷೆಯ ಫಲಿತಾಂಶದ ಬಳಿಕವಢ ಸಾವಿನ ನಿಖರ ಕಾರಣವನ್ನು ತಿಳಿಯಲು ಸಾಧ್ಯ ಎಂದು ಹೆಲ್ತ್​ ಬುಲೆಟಿನ್ ಹೇಳಿದೆ.

ಗಂಭೀರ ಸ್ಥಿತಿಯಲ್ಲಿದ್ದ ರಾಹುಲ್​ಗೆ ಶನಿವಾರದಿಂದ ಕಾಕ್ಕನಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆತನನ್ನು ವೆಂಟಿಲೇಟರ್​ನಲ್ಲಿ ಇಡಲಾಗಿದ್ದು, ಈತನಿಗೆ ಮೂತ್ರಪಿಂಡ ವೈಫಲ್ಯದ ಬೆನ್ನಲ್ಲೇ ಹೃದಯಾಘಾತವಾಗಿದೆ. ಡಯಾಲಿಸಿಸ್​ ಮೂಲಕ ಆತನನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಆದರೆ, ಆ ಬಳಿಕ ಸೆಪ್ಟಿಕ್ ಶಾಕ್‌ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಂದಹಾಗೆ ರಾಹುಲ್​ ನಾಯರ್ ಕಾಕ್ಕನಾಡದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಎಸ್​ಎಫ್​ಒ ಕಂಪನಿಯಲ್ಲಿ ಗುತ್ತಿಗೆ ನೌಕರನಾಗಿದ್ದ. ಕಳೆದ ಗುರುವಾರ ಕಾಕ್ಕನಾಡದ ಲೇ ಹಯಾತ್​ ಹೋಟೆಲ್​ನಲ್ಲಿ ಶೋರ್ಮಾ ಆರ್ಡರ್​ ಮಾಡಿದ್ದ. ರಾಹುಲ್​ ಸ್ನೇಹಿತನೂ ಸಹ ಶೋರ್ಮಾ ಸೇವನೆ ಮಾಡಿದ್ದು, ಆತನಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ, ರಾಹುಲ್​ಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಸಿಕೊಳ್ಳಲು ಆರಂಭವಾದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದ. ಆದರೆ, ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾದ್ದರಿಂದ ಭಾನುವಾರ ಬೆಳಗ್ಗೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ. ಹೆಲ್ತ್​ ಬುಲೆಟಿನ್​ ಪ್ರಕಾರ ಶೋರ್ಮಾ ತಿಂದ ಬಳಿಕ ಫುಡ್​ ಪಾಯಿಸನ್​ ಆಗಿದ್ದು, ಅಂಗಾಂಗಳ ವೈಫಲ್ಯದಿಂದ ರಾಹುಲ್​ ಮೃತಪಟ್ಟಿದ್ದಾನೆಂದು ಹೇಳಲಾಗಿದೆ.

ರಾಹುಲ್ ಸಾವಿನ ಬಳಿಕ ಆತನ ಸ್ನೇಹಿತರು ತ್ರಿಕಕ್ಕರ ಪುರಸಭೆಯ ಆರೋಗ್ಯ ಇಲಾಖೆಗೆ ದೂರವಾಣಿ ಮೂಲಕ ದೂರು ನೀಡಿದ್ದು, ಪುರಸಭೆಯ ಆರೋಗ್ಯ ಮೇಲ್ವಿಚಾರಕ ಸಹದೇವನ್ ನೇತೃತ್ವದ ತಂಡ, ರಾಹುಲ್​ ಶೋರ್ಮಾ ಖರೀದಿಸಿದ ‘ಲೇ ಹಯಾತ್’ ಮೇಲೆ ದಾಳಿ ಮಾಡಿ ಹೋಟೆಲ್​ ಅನ್ನು ಸ್ಥಗಿತಗೊಳಿಸಿತು. ನಾಳೆ ಕಲಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ ರಾಹುಲ್, ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಸಾವಿಗೆ ನಿಖರ ಕಾರಣ ಏನೆಂಬುದು ತಿಳಿಯಲಿದೆ.

Ads on article

Advertise in articles 1

advertising articles 2

Advertise under the article

ಸುರ