-->
1000938341
ನಟಿಗೆ ಖಾಸಗಿ ಅಂಗ ಪ್ರದರ್ಶಿಸಿದ ಯುವಕ ಜೈಲಿನಿಂದ ನಿಡುಗಡೆ: ಅದ್ದೂರಿ ಸ್ವಾಗತ

ನಟಿಗೆ ಖಾಸಗಿ ಅಂಗ ಪ್ರದರ್ಶಿಸಿದ ಯುವಕ ಜೈಲಿನಿಂದ ನಿಡುಗಡೆ: ಅದ್ದೂರಿ ಸ್ವಾಗತ


ಕೊಚ್ಚಿ: ನಟಿಯೋರ್ವಳಿಗೆ ಖಾಸಗಿ ಅಂಗ ಪ್ರದರ್ಶಿಸಿರುವ ಆರೋಪದ ಮೇಲೆ ಜೈಲು ಸೇರಿದ್ದ ಯುವಕನಿಗೆ ನಿನ್ನೆ ಜಾಮೀನು ದೊರಕಿದೆ. ಆತ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಅಖಿಲ ಕೇರಳ ಪುರುಷರ ಸಂಘ ಹೂವಿನ ಹಾರ ಹಾಕಿ ಅದ್ಧೂರಿ ಸ್ವಾಗತವನ್ನು ನೀಡಿದೆ.

ಆರೋಪಿ ಸಾವದ್ ಅಲುವಾ ಉಪ ಕಾರಾಗೃಹದಿಂದ ಬಿಡುಗಡೆಯಾದ ವೇಳೆ ಪುರುಷರ ಸಂಘದ ಸದಸ್ಯರು ಹೂಹಾರ ಹಾಕಿ ಬರಮಾಡಿಕೊಂಡು ಆತನಿಗೆ ಧೈರ್ಯ ತುಂಬಿದೆ.

ಸಾವದ್ ನಿಗೆ ಸ್ವಾಗತ ನೀಡುವುದಾಗಿ ಪುರುಷರ ಸಂಘದ ಮುಖ್ಯಸ್ಥ ಅಜಿತ್ ಕುಮಾರ್ ಮೊನ್ನೆಯೇ ತಿಳಿಸಿದ್ದರು. ನಟಿ ಮಾಡಿರುವ ಆರೋಪದಿಂದ ಆತ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದ. ಮನೆಯಿಂದ ಹೊರಬರಲಾಗದ ಪರಿಸ್ಥಿತಿಯಲ್ಲಿದ್ದಾನೆ. ಆತನ ಕುಟುಂಬ ಊರನ್ನೇ ಬಿಟ್ಟಿದೆ. ಸಾವದ್ ಒಳ್ಳೆಯ ಕುಟುಂಬದಿಂದ ಬಂದವನು. ಈ ಘಟನೆಯಿಂದ ಸಂಪೂರ್ಣ ಕುಗ್ಗಿ ಹೋಗಿದ್ದಾನೆ. ಊಟವನ್ನೂ ಸಹ ಮಾಡುತ್ತಿಲ್ಲ. ಜೈಲಿನಿಂದ ಬಂದ ಬಳಿಕ ಆತನ ಮುಂದಿನ ನಡೆ ಏನು? ಆತನ ಮಾನಸಿಕ ಸ್ಥಿತಿಯೇ ಬದಲಾಗಿದೆ. ಅವರಿಗೆ ಹೊಸ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತೇವೆ ಎಂದು ಅಜಿತ್ ಭರವಸೆ ನೀಡಿದ್ದಾರೆ.

ಆರಂಭದಲ್ಲಿ ನಟಿ ಮಾಡಿದ ಆರೋಪವನ್ನು ತಾನೂ ನಂಬಿದ್ದೆ. ಆದರೆ, ಘಟನೆ ನಡೆದ ಎರಡು ದಿನಗಳ ಬಳಿಕ ನಟಿ ತಮ್ಮ ಇನ್‌ಸ್ಟಾಗ್ರಾಂ ಐಡಿ ಬಗ್ಗೆ ಹೇಳಿದ ಬಳಿಕ ಆಕೆಯ ಉದ್ದೇಶವೇನೆಂದು ಅರ್ಥವಾಯಿತು. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಧಿಕ ಫಾಲೋವರ್ಸ್ ಪಡೆಯುವುದು ಆಕೆಯ ತಂತ್ರವೆಂದು ಗೊತ್ತಾಯಿತು. ಇನ್ ಸ್ಟಾಗ್ರಾಂನಲ್ಲಿ ಒಳಉಡುಪು ಧರಿಸಿರುವ ಫೋಟೊಗಳು ಮತ್ತು ವೀಡಿಯೋಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿರುವುದು ಸಾರ್ವಜನಿಕ ಗಮನವನ್ನು ಸೆಳೆಯುವುದಕ್ಕಾಗಿ. ಇಂತಹ ಘಟನೆಯ ಬಳಿಕ ಯಾವುದೇ ಹೆಣ್ಣಾಗಲಿ ಅಷ್ಟೊಂದು ಕೂಲ್ ಆಗಿ ಮಾತನಾಡಲು ಸಾಧ್ಯವಿಲ್ಲ ಎಂದು ಅಜಿತ್ ಕುಮಾರ್ ಹೇಳಿದರು. ಡಿಜಿಪಿಗೆ ದೂರು ನೀಡಿದ ಬಳಿಕ ಆಕೆ ಹೊರಗೆ ಕಾಣುತ್ತಿಲ್ಲ ಎಂದು ತಿಳಿಸಿದರು.

ಈ ಘಟನೆ ಮೇ 16ರ ಮಂಗಳವಾರ ನಡೆದಿತ್ತು. ತ್ರಿಶ್ಶೂರು ಮೂಲದ ನಟಿ ನಂದಿತಾ ಶಂಕರ್ ಬಸ್‌ನಲ್ಲಿ ನಡೆದ ಘಟನೆಯನ್ನು ವೀಡಿಯೋ ಮೂಲಕ ವಿವರಿಸಿದ್ದಾರೆ. ಇದುವರೆಗೂ ಆ ವೀಡಿಯೋವನ್ನು 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ನಂದಿತಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತಮಗಾದ ಅದೇ ರೀತಿಯ ಘಟನೆಗಳನ್ನು ಹಂಚಿಕೊಂಡಿದ್ದಾರೆ.

ನಂದಿತಾ ಸಿನಿಮಾ ಶೂಟಿಂಗ್‌ಗಾಗಿ ಮಂಗಳವಾರ ಎರ್ನಾಕುಲಂಗೆ ತೆರಳುತ್ತಿದ್ದರು. ಈ ವೇಳೆ ಅಂಗಮಾಲಿ ಎಂಬಲ್ಲಿ ಆರೋಪಿ ಸವಾದ್ ಬಸ್ ಏರಿದ್ದಾನೆ. ಬಸ್ ನಲ್ಲಿ ಇಬ್ಬರು ಮಹಿಳೆಯರು ನಡುವೆ ಕುಳಿತುಕೊಂಡಿದ್ದಾನೆ. ಆ ಇಬ್ಬರು ಮಹಿಳೆಯರಲ್ಲಿ ನಂದಿತಾ ಕೂಡ ಒಬ್ಬರು. ಬಸ್ ಹೊರಡಲಾರಂಭಿಸಿದಾಗ ನಂದಿತಾ ಅವರನ್ನು ಸ್ಪರ್ಶಿಸಲು ಆರಂಭಿಸಿದ್ದಾನೆ.

ತಾನು ಕಿಟಕಿ ಪಕ್ಕದಲ್ಲಿ ಕುಳಿತಿದ್ದೆ. ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದ. ಆತ ಕೇಳಿದ ಎಲ್ಲದಕ್ಕೂ ನಾನು ಉತ್ತರಿಸಿದೆ. ನೋಡಲು ಆತ ಒಳ್ಳೆಯವನಂತೆ ಕಾಣುತ್ತಿದ್ದ. ಬಸ್ ಅನತಿ ದೂರ ಸಾಗುತ್ತಿದ್ದಂತೆ ಆತನ ಕೈ ನನ್ನ ದೇಹವನ್ನು ಸ್ಪರ್ಶಿಸುತ್ತಿರುವಂತೆ ಭಾಸವಾಯಿತು. ನಾನು ಆತನ ಕಡೆ ನೋಡಿದಾಗ ಆತನ ಒಂದು ಕೈ ಆತನ ಖಾಸಗಿ ಅಂಗದ ಮೇಲಿರುವುದನ್ನು ಗಮನಿಸಿದೆ. ಇದರಿಂದ ನನಗೆ ತೀವ್ರ ಮುಜುಗರವಾಯಿತು. ಬಳಿಕ ಬಸ್‌ನ ಕಿಟಕಿ ಗಾಜನ್ನು ಮೇಲಕ್ಕೇರಿಸಿ ಆತನಿಂದ ಅಂತರ ಕಾಯ್ದುಕೊಂಡೆ. ಆದರೂ ತನ್ನ ದುಷ್ಕೃತ್ಯ ಮುಂದುವರಿಸಿದ್ದಾನೆ. ಮತ್ತೆ ನೋಡುವಷ್ಟರಲ್ಲಿ ತನ್ನ ಪ್ಯಾಂಟ್ ಜಿಪ್ ತೆರೆದು ಹಸ್ತಮೈಥುನ ಮಾಡತೊಡಗಿದ. ಈ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚಲಿಲ್ಲ. ಬಳಿಕ ಮೊಬೈಲ್‌ನಲ್ಲಿ ವೀಡಿಯೋ ರೆಕಾರ್ಡ್ ಮಾಡಿಕೊಂಡು ಏನು ನಿನ್ನ ಸಮಸ್ಯೆ ಎಂದು ಆತನನ್ನು ಪ್ರಶ್ನೆ ಮಾಡಿದೆ.

ಪ್ರಶ್ನೆ ಕೇಳುತ್ತಿದ್ದಂತೆಯೇ ಆತ ತಕ್ಷಣ ತನ್ನ ಪ್ಯಾಂಟ್ ಜಿಪ್ ಹಾಕಿಕೊಂಡಿದ್ದಾನೆ. ನಾನು ಧ್ವನಿ ಏರಿಸುತ್ತಿದ್ದಂತೆ ಬಸ್ ಸಿಬ್ಬಂದಿ ಬಳಿಗೆ ಬಂದಿದ್ದಾರೆ. ನಡೆದ ಘಟನೆಯನ್ನು ಅವರ ಮುಂದೆ ವಿವರಿಸಿದೆ. ದೂರು ನೀಡುತ್ತೀರಾ ಎಂದು ಬಸ್ ಕಂಡಕ್ಟರ್ ಪ್ರಶ್ನಿಸಿದರು. ನಾನು ಹೌದು ಎಂದೆ. ಈ ವೇಳೆ ಆರೋಪಿ ತನ್ನ ಪ್ಯಾಂಟ್ ಜಿಪ್ ಓಪನ್ ಆಗಿಲ್ಲ ಎಂದು ವಾದಿಸಿದ್ದಾನೆ. ಬಸ್ ವಿಮಾನ ನಿಲ್ದಾಣದ ಹತ್ತಿರ ನಿಲ್ಲುತ್ತಿದ್ದಂತೆ ಮತ್ತು ಬಸ್‌ನ ಬಾಗಿಲು ತೆರೆಯುತ್ತಿದ್ದಂತೆ ಆತ ಓಡಲಾರಂಭಿಸಿದ್ದಾನೆ. ಬಳಿಕ ಕಂಡಕ್ಟರ್ ಮತ್ತು ಡ್ರೈವರ್ ಸ್ಥಳೀಯರ ನೆರವಿನಿಂದ ಚೇಸ್ ಮಾಡಿ ಹಿಡಿದಿದ್ದಾರೆ ನಂದಿತಾ ಶಂಕರ ನಡೆದ ಘಟನೆಯನ್ನು ವೀಡಿಯೋ ಮೂಲಕ ವಿವರಿಸಿದ್ದಾರೆ.


Ads on article

Advertise in articles 1

advertising articles 2

Advertise under the article