ಇಂದೋರ್: ವಿವಾಹದಂದೇ ವರ ಹಾಗೂ ವಧುವಿನ ನಡುವೆ ಉಂಟಾದ ವಾಗ್ವಾದದ ಹಿನ್ನೆಲೆಯಲ್ಲಿ ಮನಸ್ತಾಪಗೊಂಡು ಇಬ್ಬರೂ ವಿಷ ಸೇವಿಸಿದ ಪ್ರಸಂಗವೊಂದು ನಡೆದಿದೆ. ದುರದದೃಷ್ಟವಶಾತ್ ಈ ಪ್ರಕರಣದಲ್ಲಿ ವರ ಮೃತಪಟ್ಟಿದ್ದು, ವಧುವಿನ ಸ್ಥಿತಿ ಗಂಭೀರವಾಗಿದೆ. ಪರಿಣಾಮ ಸಂಭ್ರಮದಲ್ಲಿದ್ದ ಎರಡೂ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.
ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಆದ್ದರಿಂದ 21ವರ್ಷದ ವರ ವಿಷ ಸೇವಿಸಿದ್ದಾನೆ. ಆ ಬಳಿಕ 20 ವರ್ಷದ ವಧುವಿಗೆ ಈ ವಿಚಾರವನ್ನು ತಿಳಿಸಿದ್ದಾನೆ. ಇದನ್ನು ತಿಳಿದು ಗಾಬರಿಗೊಂಡ ವಧು ತಾನೂ ಕೂಡ ವಿಷ ಸೇವಿಸಿದ್ದಾಳೆ. ಇಬ್ಬರೂ ವಿಷ ಸೇವಿಸಿದ ವಿಚಾರ ತಿಳಿದ ತಕ್ಷಣ ಮನೆಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವರ ಮೃತಪಟ್ಟಿದ್ದಾನೆ. ವಧು ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾಳೆ.
ವರನ ಕುಟುಂಬದ ಸದಸ್ಯರು ಮಾತ್ರ ಕಳೆದ ಹಲವು ದಿನಗಳಿಂದ ಯುವತಿ ತನ್ನನ್ನು ಮದುವೆಯಾಗುವಂತೆ ಯುವಕನ ಮೇಲೆ ಒತ್ತಡ ಹೇರುತ್ತಿದ್ದಳು. ಆದರೆ ಯುವಕ ಮಾತ್ರ ತನ್ನ ವೃತ್ತಿಜೀವನದ ಅಭಿವೃದ್ಧಿಗಾಗಿ ಎರಡು ವರ್ಷಗಳ ಕಾಲಾವಕಾಶ ಕೋರಿದ್ದ. ಈ ಸಂದರ್ಭ ಯುವತಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು ಎಂದಿದ್ದಾರೆ.