-->
ಮದುವೆಯಾಗುತ್ತೇನೆಂದು ದೈಹಿಕವಾಗಿ ಬಳಸಿ ವಂಚಿಸಿದ ಯುವಕನ ಕೊಲೆ: ಹಂತಕಿ ಅರೆಸ್ಟ್

ಮದುವೆಯಾಗುತ್ತೇನೆಂದು ದೈಹಿಕವಾಗಿ ಬಳಸಿ ವಂಚಿಸಿದ ಯುವಕನ ಕೊಲೆ: ಹಂತಕಿ ಅರೆಸ್ಟ್


ಬೆಂಗಳೂರು: ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಬಂಧ ಬೆಳೆಸಿ ವಂಚಿಸಿರುವ ಯುವಕನನ್ನು ಕೊಲೆಗೈದಿರುವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆ.ಪಿ ಅಗ್ರಹಾರದ ಮಂಜುನಾಥ್ ಬಾಳಪ್ಪ ಜಮಖಂಡಿ ಹತ್ಯೆಯಾದ ಯುವಕ. ಸರೋಜ ಎಂಬ ಹಂತಕಿ ಈಗ ಪೊಲೀಸ್ ಅತಿಥಿಯಾಗಿದ್ದಾಳೆ. ಮೊಬೈಲ್ ಸಿಡಿಆರ್ ಆಧರಿಸಿ ಪೊಲೀಸರು ಹಂತಕಿ ಸರೋಜಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಮೃತ ಮಂಜುನಾಥ್ ಹಾಗೂ ಮಹಿಳೆ ಸರೋಜಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಿದ್ದರೂ ಪತಿಯಿಂದ ದೂರವಿದ್ದ ಸರೋಜಾ ಬಾದಾಮಿಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದಳು. ಮಂಜುನಾಥ್ ಆಕೆಯ ಬಟ್ಟೆ ಅಂಗಡಿ ಮುಂಭಾಗದಲ್ಲಿಯೇ ಹೋಟೆಲ್ ಒಂದನ್ನು ನಡೆಸುತ್ತಿದ್ದ. ಹೀಗೆ ಇಬ್ಬರ ಪರಿಚಯವಾಗಿತ್ತು.

ಪತಿಯನ್ನು ತೊರೆದಿದ್ದ ಸರೋಜಾ, ಇನ್ನೂ ಮದುವೆಯಾಗದ ಯುವಕ ಮಂಜುನಾಥನ ಸ್ನೇಹಕ್ಕೆ ಬಿದ್ದಳು. ಈ ಸ್ನೇಹ ಸಲುಗೆಗೆ ತಿರುಗಿ ಇಬ್ಬರೊಂದಿಗೆ ದೈಹಿಕ ಸಂಪರ್ಕಕ್ಕೂ ಬೆಳೆದಿತ್ತು. ಮದುವೆಯಾಗುತ್ತೇನೆಂದು ನಂಬಿಸಿದ ಆತ ದೈಹಿಕವಾಗಿ ಮಾತ್ರ ಸರೋಜಳನ್ನು ಬಳಸಿಕೊಂಡಿದ್ದಲ್ಲದೇ ಆಕೆಯಿಂದ ಹಣವನ್ನೂ ಪೀಕಿಸುತ್ತಿದ್ದ. ಈ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಎರಡು ಕಡೆಯ ಮನೆಯವರಿಗೂ ಇವರಿಬ್ಬರ ವಿಚಾರ ಗೊತ್ತಾಗಿತ್ತು.

ಈ ಹಿನ್ನೆಲೆಯಲ್ಲಿ ಮಂಜುನಾಥನ ವಿರುದ್ಧ ಬಾದಾಮಿಯ ಗುಳೇದಗುಡ್ಡ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೊನೆಗೆ ಸರೋಜಾ ಬಾದಾಮಿಯನ್ನ ತೊರೆದು ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ತೆರೆಯಲು ಮುಂದಾಗಿದ್ದಳು. ಈ ವೇಳೆ ಬಾದಾಮಿಯಿಂದ ಮತ್ತೆ ಬೆಂಗಳೂರಿಗೆ ಬಂದ ಮಂಜುನಾಥ ಆಕೆಯ ಬೆನ್ನಿಗೆ ಬಿದ್ದಿದ್ದಾನೆ. ಕೇಸ್ ವಾಪಸ್ ತಗೆದುಕೊಂಡಲ್ಲಿ ಮದುವೆಯಾಗುತ್ತೇನೆಂದು ನಂಬಿಸಿ ಮತ್ತೆ ದೈಹಿಕವಾಗಿ ಬಳಸಿಕೊಂಡು ಹಣಕ್ಕೆ ಡಿಮ್ಯಾಂಡ್ ಮಾಡೋದನ್ನು ಮುಂದುವರೆಸಿದ್ದಾನೆ. 

ಕೊನೆಗೆ ಮಂಜುನಾಥನ ಕೃತ್ಯದಿಂದ ಬೇಸತ್ತ ಸರೋಜಾ ಒಂದು ಗತಿ ಕಾಣಿಸಲೇಬೇಕೆಂದು ನಿರ್ಧರಿಸಿದ್ದಾಳೆ. ಆದ್ದರಿಂದ ಫ್ಯಾಮಿಲಿ, ಮದುವೆ ಮಾತುಕತೆ ಮಾಡೋಣ ಎಂದು ಕರೆಸಿದ್ದಾಳೆ. ಮದುವೆ ಮಾತುಕತೆಗೆ ಬಂದವರು ಮಂಜುನಾಥ್ ನನ್ನು ಕಲ್ಲಿನಲ್ಲಿ ಜಜ್ಜಿ ಕೊಲೆಗೈದಿದ್ದಾರೆ. ಕಳೆದ ಡಿಸೆಂಬರ್ 4ರಂದು ರಾತ್ರಿ ಕೆ.ಪಿ ಅಗ್ರಹಾರದಲ್ಲಿ ಕೊಲೆಗೈದು ಸರೋಜಾ ಪರಾರಿಯಾಗಿದ್ದಳು. ಪರಿಣಾಮ ಸರೋಜಾ ಈಗ ಜೈಲು ಕಂಬಿ ಎಣಿಸುತ್ತಿದ್ದಾಳೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article