-->

 ಶುಕ್ರನ ರಾಶಿ ಪರಿವರ್ತನೆ ಪರಿಣಾಮ ಈ ರಾಶಿಯವರಿಗೆ ಒದಗಲಿದೆ ಶುಭ ಫಲ..!!

ಶುಕ್ರನ ರಾಶಿ ಪರಿವರ್ತನೆ ಪರಿಣಾಮ ಈ ರಾಶಿಯವರಿಗೆ ಒದಗಲಿದೆ ಶುಭ ಫಲ..!!


ನವರಾತ್ರಿಯಲ್ಲಿ ಶುಕ್ರನ ರಾಶಿ ಪರಿವರ್ತನೆ ಪರಿಣಾಮ ಈ ರಾಶಿಯವರಿಗೆ ಒದಗಲಿದೆ ಶುಭ ಫಲ

ಮೇಷ ರಾಶಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವರಾತ್ರಿ ಸಮಯದಲ್ಲಿ ಶುಕ್ರನ ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದೆ. ಮೇಷ ರಾಶಿಯ ಜನರು ಈ ಅವಧಿಯಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ತೊಂದರೆಗೆ ಒಳಗಾಗಬಹುದು. 




ವೃಷಭ ರಾಶಿ:
ಶುಕ್ರ ಸಂಕ್ರಮದೊಂದಿಗೆ ನವರಾತ್ರಿಯ ಈ 9 ದಿನಗಳು ಈ ಜನರಿಗೆ ಬಹಳ ವಿಶೇಷವಾಗಿರುತ್ತವೆ. ಶುಕ್ರನ ಸಂಚಾರದಿಂದ ಈ ರಾಶಿಯವರು ವ್ಯಾಪಾರ-ವ್ಯವಹಾರ, ವೃತ್ತಿ ರಂಗದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ಆರ್ಥಿಕ ಮೂಲಗಳು ಹೆಚ್ಚಾಗಲಿದೆ.


ಮಿಥುನ ರಾಶಿ:
ಶುಕ್ರನ ಸಂಚಾರದಿಂದ ಮಿಥುನ ರಾಶಿಯವರಿಗೆ ನವರಾತ್ರಿ ಬಂಪರ್ ಲಾಭವನ್ನು ತರಲಿದೆ ಎಂದು 
ಹೇಳಲಾಗುತ್ತಿದೆ. ಈ ಜನರಿಗೆ ಈ ಸಮಯವು ತುಂಬಾ ಪ್ರಯೋಜನಕಾರಿ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ಏಳ್ಗೆಯಾಗಲಿದೆ. 


ಕರ್ಕಾಟಕ ರಾಶಿ: 
ನವರಾತ್ರಿಯ ಸಮಯದಲ್ಲಿ ಶುಕ್ರನ ಸಂಚಾರದಿಂದ ಕರ್ಕಾಟಕ ರಾಶಿಯ ಜನರ ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಜೊತೆಗೆ ಸಂಪತ್ತನ್ನು ಗಳಿಸುವ ಸಾಧ್ಯತೆಯಿದೆ. ಈ ಸಮಯವು ವೃತ್ತಿಜೀವನಕ್ಕೆ ಅನುಕೂಲಕರವಾಗಿದೆ. 

ಸಿಂಹ ರಾಶಿ:
ಜ್ಯೋತಿಷ್ಯದ ಪ್ರಕಾರ, ಈ ರಾಶಿಚಕ್ರದ ಚಿಹ್ನೆಗಳ ಜನರು ವಿವಿಧ ಮೂಲಗಳಿಂದ ಹಣದ ಲಾಭವನ್ನು ಕಾಣುತ್ತಾರೆ. ಈ ಸಮಯದಲ್ಲಿ ನೀವು ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬಹುದು. ಈ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ. ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. 

Ads on article

Advertise in articles 1

advertising articles 2

Advertise under the article