ಆತ್ಮವಿಶ್ವಾಸದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದದ್ದು ಪ್ರಸ್ತುತ ಸಮಾಜದಲ್ಲಿ ಅಗತ್ಯ: ಶ್ವೇತಾ ಜೈನ್
ಮೂಡುಬಿದಿರೆ:
ಶಿಕ್ಷಣ ಅನ್ನವನ್ನು ನೀಡಿದರೆ, ಉತ್ತಮ ಸಂಸ್ಕಾರ ಬದುಕಿಗೆ ಅರ್ಥವನ್ನು ನೀಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳವುದು ಮುಖ್ಯ ಎಂದು ಖ್ಯಾತ ನ್ಯಾಯವಾದಿ ನೋಟರಿ
ಶ್ವೇತಾ ಜೈನ್ ಹೇಳಿದರು.
ಅವರು
ಆಳ್ವಾಸ್ ಪದವಿ ಪೂರ್ವ ಕಾಲೇಜು ಆಂತರಿಕ
ನಿರ್ವಹಣಾ ಸಮಿತಿ ವತಿಯಿಂದ ಆಯೋಜಿಸಿದ್ದ ‘ಪೋಷ್ ಕಾಯಿದೆ ಕುರಿತು ಜಾಗೃತಿ ಕರ್ಯಗಾರ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅತಿಯಾದ
ವಿಶ್ವಾಸ ಸಲ್ಲದು
ಆಳ್ವಾಸ್
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹಮ್ಮದ್
ಸದಾಕತ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನ್ಸಿ ಪಿ.ಏನ್, ಜೀವಶಾಸ್ತ್ರ
ವಿಭಾಗದ ಸಂಯೋಜಕಿ ಜ್ಯೋತಿ ಎಮ್,
ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ರಮಿತಾ ಹಾಗೂ ಆಂತರಿಕ
ನಿರ್ವಹಣಾ ಸಮಿತಿಯ ಸಂಯೋಜಕಿ ಡಾ. ಸುಲತಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು
ಆಳ್ವಾಸ್ ಪದವಿ ಪೂರ್ವ ಕನ್ನಡ ವಿಭಾಗದ ಉಪನ್ಯಾಸಕಿ ಉಷಾ ಬಿ ನಿರೂಪಿಸಿದರು. ರಸಾಯನ
ಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀವಿದ್ಯಾ ವಂದಿಸಿದರು.